ನಾಥ ಸಂಪ್ರದಾಯದಂತೆ ಶ್ರೀಗಳ ಅಂತಿಮ ಸಂಸ್ಕಾರ
ನಾಗಮಂಗಲ, ಜ.14: ಮಕರ ಸಂಕ್ರಾಂತಿಯ ದಿನದಂದು ಮಹಾನ್ ಮೆರವಣಿಗೆ ಮೂಲಕ ಅಗಲಿದ ಮಹಾನ್ ಚೇತನವನ್ನು ಬೆಂಗಳೂರಿನ ವಿಜಯನಗರದಿಂದ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಗೆ ಸಂಜೆ 4 ಗಂಟೆ ಸುಮಾರಿಗೆ ಕರೆ ತರಲಾಯಿತು.
ನಾಡಿನ ಎಲ್ಲಾ ದಿಕ್ಕುಗಳಿಂದಲೂ ಭಕ್ತ ಸಾಗರ ಆದಿಚುಂಚನಗಿರಿ ಕಡೆಗೆ ಹರಿದು ಬಂದಿದೆ. ನಿನ್ನೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9.45 ರ ತನಕ ವಿಜಯನಗರದ ಶಾಖಾ ಮಠದ ಅವರಣದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಸಾವಿರಾರು ಜನ ಭಕ್ತರು ಆಗಮಿಸಿದ್ದರು.
ಮಾಜಿ
ಮುಖ್ಯಮಂತ್ರಿ
ಎಚ್.
ಡಿ
ಕುಮಾರಸ್ವಾಮಿ,
ಉಪ
ಮುಖ್ಯಮಂತ್ರಿ
ಆರ್
ಅಶೋಕ್,
ಸಂಸದರಾದ
ಅನಂತ್
ಕುಮಾರ್
ಮತ್ತು
ಚಲುವರಾಯಸ್ವಾಮಿ
ಅವರು
ಪಾರ್ಥೀವ
ಶರೀರಕ್ಕೆ
ಹೆಗಲು
ಕೊಟ್ಟು
ಮೆರವಣಿಗೆಗೆ
ಚಾಲನೆ
ನೀಡಿದ್ದಲ್ಲದೆ
ಶ್ರೀಮಠಕ್ಕೆ
ತೆರಳಿದರು.
ಮೆರವಣಿಗೆ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ ವೃತ್ತ, ಕೆಎಚ್ ಬಿ ಜಂಕ್ಷನ್, ಸುಮನಹಳ್ಳಿ, ಹೊರ ವರ್ತುಲ ರಸ್ತೆ, ಎಫ್ ಟಿಐ ವೃತ್ತ, ಟಿವಿಎಸ್ ಕ್ರಾಸ್, ಜಾಲಹಳ್ಳಿ ವೃತ್ತ, ಟಿ ದಾಸರಹಳ್ಳಿ, 8ನೇ ಮೈಲಿ ಮೂಲಕ ನೆಲಮಂಗಲ ತಲುಪಿತು.
ನಂತರ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಲಿಸಿ ತಿರುವು ಪಡೆದು ಸೋಲೂರು, ಕುಣಿಗಲ್ ಮಾರ್ಗವಾಗಿ ಬೆಳ್ಳೂರು ಕ್ರಾಸ್ ತಲುಪಿ ಆದಿಚುಂಚನಗಿರಿ ಕ್ಷೇತ್ರ ಪ್ರವೇಶಿಸಿತು.
ನಾಥ ಪರಂಪರೆಯ ಸಂಪ್ರದಾಯದಂತೆ ಸ್ವಾಮೀಜಿಗಳ ಪಾರ್ಥೀವ ಶರೀರಕ್ಕೆ ಪೂಜೆ ಪುನಸ್ಕಾರ ನೆರವೇರಿಸಲಾಗಿದೆ. ಧಾರ್ಮಿಕ ವಿಧಿ ವಿಧಾನಗಳು ಕಾಲ ಭೈರವೇಶ್ವರ ದೇಗುಲದ ಮುಂಭಾಗದ ವೇದಿಕೆಯ ಬಳಿ ನಡೆಸಲಾಗಿದೆ.
ಇದಕ್ಕೂ ಮುನ್ನ ಬಾಲಗಂಗಾಧರನಾಥ ಸ್ವಾಮೀಜಿಗಳ ಉಯಿಲಿನಂತೆ ನೂತನ ಉತ್ತರಾಧಿಕಾರಿಯಾಗಿ ನಿರ್ಮಲಾನಾಥ ಸ್ವಾಮೀಜಿ ಅವರನ್ನು 72ನೇ ಪೀಠಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಮಠದ ಅಧಿಕಾರಿ ಬಾಲಕೃಷ್ಣಗೌಡ ಘೋಷಿಸಿದರು.
ಎದೆನೋವಿನಿಂದ ಬಳಲುತ್ತಿದ್ದ ಸ್ವಾಮೀಜಿಗಳನ್ನು ಶನಿವಾರ (ಜ.12) ಚಿಕಿತ್ಸೆಗಾಗಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಭಾನುವಾರ ರಕ್ತದೊತ್ತಡ ಹೆಚ್ಚಾಗಿ ತೀವ್ರ ಅಸ್ವಸ್ಥರಾಗಿ ಸಂಜೆ 7 ಗಂಟೆ ವೇಳೆಗೆ ಮತ್ತೊಮ್ಮೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು ಎಂದು ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ ಡಾ. ವೆಂಕಟರಮಣ ಹೇಳಿದ್ದಾರೆ.