ಗೋಹತ್ಯೆ ನಿಷೇಧ:ಗವರ್ನರ್ ಭೇಟಿ ಮಾಡಿದ ಎಚ್ಡಿಕೆ
ಶುಕ್ರವಾರ (ಡಿ 14) ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಆಡಳಿತ ಬಿಜೆಪಿ ಪಕ್ಷ ಕಲಾಪದ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಂಡಿದೆ.
ವಿರೋಧಪಕ್ಷಗಳು ಸಭ್ಯಾತ್ಯಾಗ ಮಾಡಿದ ಸಮಯದಲ್ಲಿ ವಿಧೇಯಕವನ್ನು ಮಂಡಿಸಲಾಗಿದೆ ಎಂದು ರಾಜ್ಯಪಾಲರಿಗೆ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಸರಕಾರ ಗೋಹತ್ಯೆ ನಿಷೇಧ ಮತ್ತು ಖಾಸಾಗಿ ವಿಶ್ವವಿದ್ಯಾಲಯಗಳ ಕುರಿತು ಮಸೂದೆ ಮಂಡಿಸಿದೆ. ವಿರೋಧಪಕ್ಷಗಳ ಅನುಪಸ್ಥಿತಿಯಲ್ಲಿ ಮಸೂದೆಗೆ ಅಂಗೀಕಾರ ಕೂಡ ಪಡೆದುಕೊಂಡಿದೆ.
ವಿಧೇಯಕಗಳನ್ನು ನೀವು ಆಂಗೀಕರಿಸಬಾರದು ಎಂದು ಕುಮಾರಸ್ವಾಮಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಲ್ಲಿ ಮನವಿ ಮಾಡಿದ್ದಾರೆ.
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಧಿವೇಶನವನ್ನು ಒಂದು ದಿನ ವಿಸ್ತರಿಸಬೇಕೆಂದು ಸ್ಪೀಕರ್ ಬೋಪಯ್ಯ ಅವರಲ್ಲಿ ವಿನಂತಿಸಿ ಕೊಂಡಿದ್ದರು.
ಸ್ಪೀಕರ್ ಇದಕ್ಕೆ ಅನುಮತಿ ನಿರಾಕರಿಸಿದರು, ಇದನ್ನು ಪ್ರತಿಭಟಿಸಿ ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಸಭಾತ್ಯಾಗ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಲವು ವಿಧೇಯಕಗಳನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಂಡಿದೆ ಎಂದು ಕುಮಾರಸ್ವಾಮಿ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ.