ನನ್ನ ಗಂಡನಿಗೆ ಇಷ್ಟವಿಲ್ಲ, ನಾನು ಸ್ಪರ್ಧಿಸಲ್ಲ
ನಿಜಕ್ಕೂ ಅಮಿತಾಬ್ ಬಚ್ಚನ್ ಗೆ ತನ್ನ ಪತ್ನಿ ರಾಜಕೀಯವಾಗಿ ಬೆಳೆಯುವುದು ಸಹಿಸಲು ಆಗುತ್ತಿಲ್ಲವೇ ಎಂಬ ಪ್ರಶ್ನೆ ಎಲ್ಲೆಡೆ ಗಿರಕಿ ಹೊಡೆಯುತ್ತಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ಕೇಳಿದಾಗ ಜಯಾ ಈ ರೀತಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಉತ್ತರ ಪ್ರದೇಶದ ಭಾಡೈ ಪ್ರದೇಶದಲ್ಲಿ ಸಮಾಜಿಕ ಸುಧಾರಣೆ ಮೂಲಕ ಜನಪ್ರಿಯತೆ ಗಳಿಸಿರುವ ಜಯಾ ಅವರು ಈ ರೀತಿ ಹೇಳಿರುವುದು ಕ್ಷೇತ್ರದ ಜನತೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಹಾಗೂ ಅಮಿತಾಬ್ ಬಚ್ಚನ್ ನಡುವಿನ ಆಂತರಿಕ ಕಚ್ಚಾಟದ ಪರಿಣಾಮ ಜಯಾ ಬಚ್ಚನ್ ಅವರ ಮೇಲಾಗುತ್ತಿದೆ.
ಬಚ್ಚನ್ ಪರಿವಾರದ ವಿರುದ್ಧ ಸ್ವಾರ್ಥಿಗಳು ಎಂದು ವಿಷಕಾರಿದ್ದ ಅಮರ್ ಸಿಂಗ್ ಅವರು ಇನ್ನು ಒಂದು ಹೆಜ್ಜೆ ಮುಂದಿಟ್ಟು, ನಾನೇನಾದರೂ ಆತ್ಮಚರಿತ್ರೆ ಬರೆದರೆ 'ಸ್ಟಾರ್' ಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದರು.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮರ್ ಸಿಂಗ್, ನಾನು ಬೇಕೆಂತಲೇ ನನ್ನ ಮಾತುಗಳನ್ನು ಹಿಡಿದಿಟ್ಟುಕೊಂಡಿದ್ದೇನೆ. ನಾನು ಬಾಯ್ಬಿಟ್ಟರೆ, ಸಿನಿ ತಾರೆಗಳ ಜೊತೆಗೆ ಹಲವು ಜನ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಚ್ಚರ ಎಂದಿದ್ದರು.
ಇಷ್ಟಕ್ಕೂ ಗಳಸ್ಯ ಕಂಠಸ್ಯ ಎಂಬಂತೆ ಇದ್ದ ಅಮಿತಾಬ್ ಹಾಗೂ ಅಮರ್ ಸಿಂಗ್ ಗೆಳೆತನ ಈ ರೀತಿ ಆಗಲು ಕಾರಣವೇನು? ಎಂದು ಹುಡುಕಿದರೆ ಉತ್ತರ ಸುಲಭವಿದೆ.
ಅಮರ್ ಸಿಂಗ್ ಜೈಲಿನಲ್ಲಿದ್ದಾಗ ಅಮಿತಾಬ್ ಹೋಗಿ ನೋಡುವುದಿರಲಿ, ಕರೆ ಕೂಡಾ ಮಾಡಿರಲಿಲ್ಲ. 2.5 ಕೋಟಿ ರು ಬೃಹತ್ ಜಾಮೀನು ಮೊತ್ತ ನೀಡಲು ಅಮಿತಾಬ್ ಸಹಕರಿಸಲಿಲ್ಲ. ನಂತರ ಕೂಡಾ ಅಮಿತಾಬ್ ಮಾತನಾಡಿಸಿರಲಿಲ್ಲ. ಈ ಸಿಟ್ಟು ಅಮರ್ ಸಿಂಗ್ ಗೆ ಇನ್ನೂ ಆರಿಲ್ಲ.
ಅಮರ್ ಸಿಂಗ್ ಗೆ ಸಹಾಯ ಮಾಡಿದ್ದಾರೆ ನಾನು ದಿವಾಳಿಯಾಗುತ್ತಿದ್ದೆ ಎಂದು ಅಮಿತಾಬ್ ಹೇಳಿದ್ದಾರೆ. ಆದರೆ, ಆತನಿಗೆ ಧೈರ್ಯ ಕಮ್ಮಿ. ಆದರೆ, 'ಕಷ್ಟದಲ್ಲಿರುವವರಿಗೆ ಸಹಾಯ ಮಾಡು, ಸ್ವಾರ್ಥಗಳ ಕೈ ಹಿಡಿಯಬೇಡ' ಎಂಬ ಪಾಠವನ್ನು ಈ ಪ್ರಸಂಗದಿಂದ ನಾನು ಕಲಿತ್ತಿದ್ದೇನೆ ಎಂದು ಅಮರ್ ಸಿಂಗ್ ಹೇಳಿದ್ದಾರೆ.
ನನ್ನ ಪ್ರಕಾರ ಜಯಾ ಬಚ್ಚನ್ ಮದುವೆ ಸಮಯದಲ್ಲಿ ಜಯಾ ಬಾಧುರಿ ಅವರೇ ದೊಡ್ಡ ಸ್ಟಾರ್ ಆಗಿದ್ದರು. ಈಗ ಅಮಿತಾಬ್ ವಿಶ್ವದಲ್ಲೇ ದೊಡ್ಡ ಹೆಸರುವಾಸಿ. ಸೊಸೆ ಐಶ್ವರ್ಯಾ ರೈ ಕೂಡಾ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.
ಇವರ ಪ್ರತಿಷ್ಠೆಗೆ ಜಯಾ ಅವರ ರಾಜಕೀಯ ಭವಿಷ್ಯ ಮಂಕಾಗಿದೆ. ಅದಕ್ಕಾಗಿ ಆಕೆ ರಾಜ್ಯಸಭಾ ಸದಸ್ಯ ಆಗೇ ಉಳಿಯಲು ಬಯಸಿದ್ದಾರೆ. ರಾಜಕೀಯ ಪಾಠ ಕಲಿತ ಮೇಲೆ ಜಯಾ ಕೂಡಾ ನನ್ನನ್ನು ಮರೆತು ಬಿಟ್ಟರು ಎಂದು ಅಮರ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಹಳೆ ಸಿನಿಮಾವೊಂದರ ಕಥೆಯಂತೆ ಅಮಿತಾಬ್ ಹಾಗೂ ಜಯಾ ಅವರ ನಡುವಿನ ಪೈಪೋಟಿ, ಜಯಾ ಅವರ ವೃತ್ತಿಗೆ ಮುಳುವಾಗಿರುವುದು ಸುಳ್ಳಲ್ಲ.