ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತಾಗೆ ಛಂದ 'ಮುಖಪುಟ ವಿನ್ಯಾಸ' ಬಹುಮಾನ

By Prasad
|
Google Oneindia Kannada News

Chanda cover page design competition winner
ಬೆಂಗಳೂರು, ಡಿ. 10 : ಛಂದ ಪುಸ್ತಕ ಪ್ರಕಾಶನ ಏರ್ಪಡಿಸಿದ್ದ 'ಛಂದ ಮುಖಪುಟ' ಸ್ಪರ್ಧೆಯಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಶ್ವೇತಾ ಆಡುಕಳ ಅವರು ರಚಿಸಿರುವ ಸುಂದರ ವರ್ಣರಂಜಿತ ವಿನ್ಯಾಸಕ್ಕೆ ಪ್ರಥಮ ಬಹುಮಾನ ಬಂದಿದೆ.

ಕಥೆಗಾರ ವಸುಧೇಂದ್ರ ಅವರ ಸುಲಲಿತ ಪ್ರಬಂಧಗಳ ಸಂಕಲನ 'ವರ್ಣಮಯ' ಪುಸ್ತಕಕ್ಕೆ ಮುಖಪುಟ ವಿನ್ಯಾಸ ರಚಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಚುಕ್ಕುಬುಕ್ಕು ಕನ್ನಡ ಪೋರ್ಟಲ್ ಈ ಸ್ಪರ್ಧೆಗೆ ಛಂದ ಪುಸ್ತಕ ಪ್ರಕಾಶನದೊಡನೆ ಕೈ ಜೋಡಿಸಿತ್ತು.

ಡಿಸೆಂಬರ್ 16ರಂದು ಬಿಡುಗಡೆಯಾಗಲಿರುವ ವಸುಧೇಂದ್ರರ 'ವರ್ಣಮಯ' ಎಂಬ ಸುಲಲಿತ ಪ್ರಬಂಧ ಸಂಕಲನಕ್ಕೆ ಈ ಮುಖಪುಟವನ್ನು ಬಳಸಿಕೊಳ್ಳಲಾಗುವುದು. ಶ್ವೇತಾರವರಿಗೆ 5,000 ರುಪಾಯಿ ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ನೀಡಲಾಗುವುದು.

ಉತ್ತರ ಕನ್ನಡ ಜಿಲ್ಲೆಯ ಶ್ವೇತಾ, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಎಂಎಫ್‌ಎ ಅನ್ವಯಕಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕ್ಯಾಮೆರಾ ಹೊತ್ತು ಸುತ್ತುವುದನ್ನು ತುಂಬಾ ಇಷ್ಟಪಡುವ ಶ್ವೇತಾ ಆಡುಕಳ ಅವರು ಪದವಿ ಮುಗಿಸಿದ್ದು ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ.

150ಕ್ಕೂ ಹೆಚ್ಚು ವಿನ್ಯಾಸಗಳ ತೀವ್ರ ಪೈಪೋಟಿಯ ಈ ಛಂದ ಮುಖಪುಟ ವಿನ್ಯಾಸ ಸ್ಪರ್ಧೆಯ ತೀರ್ಪು ನೀಡಿರುವುದು ನಾಡಿನ ಖ್ಯಾತ ಕಲಾವಿದ ಪ.ಸ. ಕುಮಾರ್‌ರವರು. ವಸುಧೇಂದ್ರ ಅವರ ಹೊಸ ಪುಸ್ತಕ ವರ್ಣಮಯ ಡಿ.16ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅಂದೇ ಶ್ವೇತಾ ಅವರಿಗೆ ಬಹುಮಾನವನ್ನೂ ವಿತರಿಸಲಾಗುವುದು.

English summary
Shwetha Adukala, Bangalore Chitrakala Parishat student, has won Chanda cover page design contest conducted by Chanda Pustaka Prakashana for the new essay collection of short story writer Vasudhendra. The award ceremony and book release will be done on December 16 in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X