ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ನಿಜವಾದ ಹೀರೊ- ಅವನಿಗೆ ಗಲ್ಲು ಬೇಡವಾಗಿತ್ತು

By Srinath
|
Google Oneindia Kannada News

ajmal-kasab-hero-will-inspire-more-attack-let-commander
ಪುಣೆ, ನ. 21: ಇತ್ತ Operation X ಮೂಲಕ ಉಗ್ರ ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಿ, ಇಡೀ ನಾಡು ಸಂಭ್ರಮಿಸುತ್ತಿದ್ದರೆ ಅತ್ತ ಅಜ್ಮಲ್ ಕಸಬ್ ನಿಜಕ್ಕೂ 'ನಿಜವಾದ ಹೀರೊ' ಎಂದು ಬಣ್ಣಿಸಲಾಗಿದೆ.

ಮುಂಬೈ ದಾಳಿಗೆ ವಿಚಾರದಲ್ಲಿ ಅಜ್ಮಲ್ ಕಸಬ್ ನಿಜವಾದ ಹೀರೊ. ಆತ ನಿಭಾಯಿಸಿದ ಪಾತ್ರವು ಮತ್ತಷ್ಟು ದಾಳಿಗಳಿಗೆ ಪ್ರೇರಕವಾಗುವುರದಲ್ಲಿ ಯಾವುದೇ ಸಂಶಯವಿಲ್ಲ' ಎಂದು ಮುಂಬೈ ದಾಳಿಯ ಸೂತ್ರಧಾರಿ, ಪಾಕ್ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯ್ಬಾದ (LeT) ಕಮಾಂಡರ್ ಪ್ರತಿಕ್ರಿಯೆ ನೀಡಿದ್ದಾನೆ.

ಅಜ್ಮಲ್ ಕಸಬನನ್ನು ಗಲ್ಲಿಗೇರಿಸಿ ಸುದ್ದಿ ಇಡೀ ಪ್ರಪಂಚಕ್ಕೆ ಬಿತ್ತರವಾಗುತ್ತಿದ್ದಂತೆ ಲಷ್ಕರ್ ಎ ತಯ್ಬಾ ಕಮಾಂಡರ್ Reuters ಸುದ್ದಿ ಸಂಸ್ಥೆಗೆ ದೂರವಾಣಿ ಕರೆ ಮಾಡಿ ಪ್ರತಿಕ್ರಿಯೆ ನೀಡಿದ್ದಾನೆ. ಆದರೆ ಅವನು ಎಲ್ಲಿಂದ ತಾನು ಫೋನ್ ಮಾಡುತ್ತಿರುವುದಾಗಿ ತಿಳಿಸಿಲ್ಲ.

ಗಲ್ಲು ಬೇಡವೆಂದಿದ್ದ 220 ಭಾರತೀಯರು: ಕುತೂಹಲದ ಸಂಗತಿಯೆಂದರೆ ಸುಮಾರು 220 ಕಾರ್ಯಕರ್ತರು, ವಕೀಲರು, ಶಿಕ್ಷಣ ತಜ್ಞರು ಇತ್ತೀಚೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು, 'ಅಜ್ಮಲ್ ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸಬಾರದು. ಆತನಿಗೆ ಕ್ಷಮಾದಾನ ನೀಡಬೇಕು' ಎಂದು ಆಗ್ರಹಿಸಿದ್ದರು.

ಯುಗ್ ಚೌಧರಿ ಎಂಬ ವಕೀಲ ಅಕ್ಟೋಬರ್ 28ರಂದು ರಾಷ್ಟ್ರಪತಿಗೆ ಒಂದು ಪತ್ರ ಬರೆದು, '203 ಭಾರತೀಯರು' ತನ್ನ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಅಜ್ಮಲ್ ಕಸಬ್ ಗೆ ಕ್ಷಮಾದಾನ ನೀಡಬೇಕು' ಎಂದು ಮನವಿ ಮಾಡಿದ್ದರು.

English summary
Mohammad Ajmal Kasab, executed in India on Wednesday for his role in the 2008 Mumbai massacre, was a "hero" who will inspire more attacks, said a senior commander of the Pakistani militant group (LeT) accused of masterminding the attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X