ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲ್ ಸೆಂಟರ್ ಉದ್ಯೋಗಿ ನದಿಗೆ ಹಾರಿ ಆತ್ಮಹತ್ಯೆ

By Srinath
|
Google Oneindia Kannada News

mng-mulky-call-centre-employee-suicide-shambavi-river
ಮುಲ್ಕಿ, ನ.10: ಕಾಲ್ ಸೆಂಟರ್ ಒಂದರಲ್ಲಿ ಉದ್ಯೋಗಿಯಾಗಿದ್ದ 24 ವರ್ಷದ ಯುವಕನೊಬ್ಬ ಶುಕ್ರವಾರ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಕಡವಿನ ಬಾಗಿಲು ನಿವಾಸಿ ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ.

ಬುಧವಾರ ಕೆಲಸ ಮುಗಿಸಿಕೊಂಡು ವಾಪಸಾಗಿದ್ದ ವಿನೋದ್, ಮನೆಗೆ ಹಿಂದಿರುಗಿರಲಿಲ್ಲ. ತೀವ್ರ ಹುಡುಕಾಟದ ಬಳಿಕ Athikaari Bettu ಗ್ರಾಮದ ಪಲಿಮಾರು ಸೇತುವೆ ಬಳಿ ವಿನೋದ್ ಶವ ಪತ್ತೆಯಾಗಿತ್ತು. ನದಿ ಪಕ್ಕ ಮೃತ ವಿನೋದನ ಬೈಕ್ ಸಹ ಬಿದ್ದಿತ್ತು. ವಿನೋದ್, ಕೆಲವು ದಿನಗಳಿಂದ ಕೆಲಸಕ್ಕೆ ಚಕ್ಕರ್ ಹೊಡೆಯುತ್ತಿದ್ದ ಎನ್ನಲಾಗಿದೆ.

ಮುಲ್ಕಿ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವಪರೀಕ್ಷೆಯ ಬಳಿಕ ದೇಹವನ್ನು ಮೃತನ ಸಂಬಂಧಿಕರಿಗೆ ಒಪ್ಪಿಸಲಾಗಿದೆ. ವಿನೋದ್ ಯಾವುದೇ ಮರಣ ಪತ್ರ ಬರೆದಿಟ್ಟಿಲ್ಲ. ಆತನ ಆತ್ಮಹತ್ಯೆಗೆ ಕಾರಣ ಏನೆಂಬುದು ಸದ್ಯಕ್ಕೆ ಯಿಳಿದುಬಂದಿಲ್ಲ.

English summary
Mangalore Mulky: A 24-year-old call centre employee, Vinod Kumar, a native of Kadavina Bhagilu, commits suicide in Shambavi River on Friday November 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X