ದೀಪಾವಳಿ ಧಮಾಕಾ, ಬಸ್ ರೇಟ್ ಒನ್ ಟು ಡಬಲ್
ಶನಿವಾರದಿಂದ ಆರಂಭವಾಗುವ ಐದು ದಿನಗಳ ದೀಪಾವಳಿ ರಜೆಯ ಭರಪೂರ ಲಾಭ ಪಡೆದುಕೊಂಡಿರುವ ಖಾಸಗಿ ಬಸ್ಸುಗಳು ಲಂಗುಲಗಾಮಿಲ್ಲದೆ ಟಿಕೆಟ್ ದರವನ್ನು ಹೆಚ್ಚಿಸಿವೆ.
ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಖಾಸಗಿ ಬಸ್ಸುಗಳು ಟಿಕೆಟ್ ದರವನ್ನು ಮಾಮೂಲಿ ದಿನಗಳಿಗಿಂತ ಶೇ.40 ರಿಂದ ಶೇ.50 ಹೆಚ್ಚಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಬಾರಿ ಟಿಕೆಟ್ ದರವನ್ನು ಮನ ಬಂದಂತೆ ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಲಕ್ಷ್ಮಿ ಪಟಾಕಿ ಇಟ್ಟಿದೆ.
ಬೆಂಗಳೂರಿನಿಂದ ಹೊರಡುವ ಖಾಸಗಿ ಬಸ್ಸುಗಳು ಪ್ರಯಾಣಿಕರ ಬೇಡಿಕೆಯ ಅನುಸಾರ ಟಿಕೆಟ್ ದರವನ್ನು ಮನಬಂದಂತೆ ನಿಗದಿ ಮಾಡಿವೆ. ಯಾವ ಮಟ್ಟಿಗೆ ಟಿಕೆಟ್ ದರ ಹೆಚ್ಚಿಸಿವೆ ಅಂದರೆ ಬಸ್ ಖರೀದಿಗೆ ಬ್ಯಾಂಕಿನಿಂದ ಪಡೆದ ಸಾಲದ ಒಂದು ವರ್ಷದ ಇಎಂಐ ಕಂತು ದೀಪಾವಳಿ ಮುಗಿಯುವುದರೊಳಗೆ ತೀರಿಸ ಬೇಕೆನ್ನುವಷ್ಟರ ಮಟ್ಟಿಗೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಾಮೂಲಿ ದಿನಗಳಲ್ಲಿ ಟಿಕೆಟ್ ದರ ರೂ. 550 ಇದ್ದರೆ 3400 ರೂಪಾಯಿ ವರೆಗೆ ಹೆಚ್ಚಿಸಿ ದರೋಡೆ ಮಾಡುತ್ತಿವೆ. ಒಂದು ಟಿಕೆಟ್ ಮೇಲೆ ಈ ಮಟ್ಟಿನ ಲಾಭವಾದರೆ ಒಂದು ಟ್ರಿಪ್ ನಲ್ಲಿ ಅವರು ಮಾಡುವ ಲಾಭದ ಮೊತ್ತ ಎಷ್ಟಾಗಬಹದು!!
ಬೆಂಗಳೂರಿನಿಂದ ರಾಜ್ಯದ ಆಯ್ದ ಕೆಲ ನಗರಗಳಿಗೆ ಖಾಸಗಿ ಬಸ್ಸುಗಳ ದೀಪಾವಳಿ 2012 ಟಿಕೆಟ್ ದರ ಇಂತಿದೆ:
ಬೆಂಗಳೂರು
-
ಹುಬ್ಬಳ್ಳಿ
-
ರೂ.
2200
ರಿಂದ
3400
(ಮಾಮೂಲಿ
ದರ
ರೂ.
400
ರಿಂದ
550)
ಬೆಂಗಳೂರು
-
ಉಡುಪಿ
-
ರೂ.
850
ರಿಂದ
1100
(ಮಾಮೂಲಿ
ದರ
ರೂ.
375
ರಿಂದ
500)
ಬೆಂಗಳೂರು
-
ಮೈಸೂರು
-
ರೂ.
250
ರಿಂದ
400
(ಮಾಮೂಲಿ
ದರ
ರೂ.
110
ರಿಂದ
180)
ಬೆಂಗಳೂರು
-
ರಾಯಚೂರು
-
ರೂ.
850
ರಿಂದ
1050
(
ಮಾಮೂಲಿ
ದರ
ರೂ.400
ರಿಂದ
650)
ಬೆಂಗಳೂರು
-
ಶಿವಮೊಗ್ಗ
-
ರೂ
750
ರಿಂದ
900
(ಮಾಮೂಲಿ
ದರ
ರೂ.230
ರಿಂದ
400)
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ