ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವರಿಷ್ಠರಿಗೆ ತುಮಕೂರು ಎಂಪಿ ಚಾಲೆಂಜ್

|
Google Oneindia Kannada News

 I will participate in Yeddyurappa's convention in Haveri
ಬೆಂಗಳೂರು, ಅ 26: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪರ ಬ್ಯಾಟ್ ಮಾಡುತ್ತಿರುವವರ ಹಿತೈಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಬಿಎಸ್ವೈ ಪರಮಾಪ್ತ ಮತ್ತು ತುಮಕೂರು ಬಿಜೆಪಿ ಸಂಸದ ಜಿ ಎಸ್ ಬಸವರಾಜ್ ಮತ್ತೆ ಯಡಿಯೂರಪ್ಪ ಪರ ನಿಂತಿದ್ದಾರೆ.

ನಾನು ಬಿಜೆಪಿಗೆ ರಾಜೀನಾಮೆ ನೀಡುವುದಿಲ್ಲ. ನಾನು ಕರ್ನಾಟಕ ಜನತಾ ಪಕ್ಷದ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತೇನೆ ಎಂದು ವರಿಷ್ಠರ ಎದುರು ಬಸವರಾಜ್ ತೊಡೆ ತಟ್ಟಿ ನಿಂತಿದ್ದಾರೆ.

ಡಿಸೆಂಬರ್ 10ರಂದು ಹಾವೇರಿಯಲ್ಲಿ ನಡೆಯಲಿರುವ ಕರ್ನಾಟಕ ಜನತಾ ಪಕ್ಷದ ಸಮಾವೇಶದಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಬಿಜೆಪಿ ಹೈಕಮಾಂಡ್ ಏನು ಮಾಡುತ್ತೋ ಮಾಡಿಕೊಳ್ಳಲಿ. ಬೇಕಾದರೆ ಬಿಜೆಪಿಯಿಂದ ನನ್ನ ಉಚ್ಚಾಟಿಸಲಿ ಎಂದು ಬಸವರಾಜ್ ವರಿಷ್ಠರಿಗೆ ಸವಾಲೆಸೆದಿದ್ದಾರೆ.

ಯಡಿಯೂರಪ್ಪನವರನ್ನು ದೆಹಲಿಯ ವರಿಷ್ಠರು ಮತ್ತು ರಾಜ್ಯದ ನಾಯಕರುಗಳು ನಡೆಸಿಕೊಳ್ಳುತ್ತಿರುವ ರೀತಿ ನೋಡುತ್ತಿದ್ದರೆ ವ್ಯಥೆಯಾಗುತ್ತಿದೆ. ನನ್ನ ನಿಷ್ಠೆ ಏನಿದ್ದರೂ ಅದು ಯಡಿಯೂರಪ್ಪನವರ ಮೇಲೆ, ಇದಕ್ಕಾಗಿ ನಾನು ಯಾವ ತ್ಯಾಗಕ್ಕೂ ಸಿದ್ದ ಎಂದು ಬಸವರಾಜ್ ಹೇಳಿದ್ದಾರೆ.

ಯಡಿಯೂರಪ್ಪ ಎಲ್ಲಾ ಹಗರಣದಿಂದ ಹೆಚ್ಚು ಕಮ್ಮಿ ಮುಕ್ತರಾಗಿದ್ದಾರೆ. ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದವರು ಮುಂದೊಂದು ದಿನ ಅನುಭವಿಸುತ್ತಾರೆ ಎಂದು ಬಸವರಾಜ್ ಲೋಕೋಪಯೋಗಿ ಸಚಿವ ಉದಾಸಿ ನಿವಾಸದಲ್ಲಿ ಶುಕ್ರವಾರ (ಅ 26) ನಡೆದ ಸಭೆಯ ಬಳಿಕ ಹೇಳಿದ್ದಾರೆ.

ಯಡಿಯೂರಪ್ಪ ಎಲ್ಲಿ ಇರುತ್ತಾರೋ ಈ ಬಸವರಾಜ್ ಅಲ್ಲಿ ಇರುತ್ತಾನೆ. ದೆಹಲಿಯ ಹೈಕಮಾಂಡ್ ನನ್ನ ಮೇಲೆ ಶಿಸ್ತಿನ ಕ್ರಮ ತೆಗೆದುಕೊಂಡರೆ ನಾನು ಕ್ಯಾರೇ ಮಾಡುವವನಲ್ಲ ಎಂದು ಬಸವರಾಜ್ ಕಡ್ಡಿ ಮುರಿದಹಾಗೆ ಹೇಳಿದ್ದಾರೆ.

ಈಗಾಗಲೇ ಸಹಕಾರ ಸಚಿವ ಬಿ ಜಿ ಪುಟ್ಟಸ್ವಾಮಿ ಮತ್ತು ಪಶುಸಂಗೋಪನಾ ಸಚಿವ ರೇವೂನಾಯಕ್ ಬೆಳಮಗಿ ಯಡಿಯೂರಪ್ಪ ಪರ ಹೇಳಿಕೆ ನೀಡಿದ್ದಾರೆ.

English summary
Tumkur BJP MP Basavaraj has challenged the high command by saying, he will participate in Yeddyurappa's proposed convention in Haveri on December 10. On that day BSY will be officially announcing his new party Karnataka Janata Party (KJP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X