ಮಟನ್ ಬೆಲೆ ಗಗನಕ್ಕೆ,ಇದು ಬಕ್ರೀದ್ ಸ್ಪೆಷಲ್
ಬೆಂಗಳೂರು, ಅ.22: ಪವಿತ್ರ ಹಬ್ಬ ಈದುಲ್ ಅಝ್ಹಾ (ಬಕ್ರೀದ್)ಗೆ ಇನ್ನು ಒಂದು ವಾರ ಇರುವಂತೆಯೇ ನಗರದ ಶಿವಾಜಿನಗರದಲ್ಲಿ ಮಾಂಸದ ಬೇಡಿಕೆ ಹೆಚ್ಚಾಗಿದೆ. ಬಕ್ರೀದ್ ಗೂ ಎರಡು ದಿನ ಇರುವಂತೆ ಬೆಲೆ ಇನ್ನಷ್ಟು ಏರುವ ನಿರೀಕ್ಷೆಯಿದೆ ಎಂದು ರಾಜ್ಯ ಮಟನ್ ಮರ್ಚೆಂಟ್ ಅಸೋಷಿಯೇಷನ್ ಅಧ್ಯಕ್ಷ ಇಕ್ಬಾಲ್ ಹೇಳಿದ್ದಾರೆ.
ಅಕ್ಟೋಬರ್.26
(ಕೆಲವೆಡೆ
ಅ.27ಕ್ಕೆ
ಬಕ್ರೀದ್
ಆಚರಣೆ)
ರಂದು
ರಾಜ್ಯದಾದ್ಯಂತ
ಮುಸ್ಲಿಮರು
ಬಕ್ರೀದ್
ಆಚರಿಸಲಿದ್ದಾರೆ.
ವಿಶೇಷವಾಗಿ
ಕರಾವಳಿ
ಜಿಲ್ಲೆಗಳಲ್ಲಿನ
ಎಲ್ಲ
ಜುಮಾ
ಮಸೀದಿ
ಮತ್ತು
ಪ್ರಮುಖ
ಈದ್ಗಾ
ಮೈದಾನಗಳಲ್ಲಿ
ಈದ್
ನಮಾಝ್
ಮತ್ತು
ಖುತುಬಾಕ್ಕೆ
ಸಕಲ
ವ್ಯವಸ್ಥೆ
ಕಲ್ಪಿಸಲಾಗಿದೆ.
ಎಲ್ಲಾ ಈದ್ಗಾ ಮಸೀದಿಯಲ್ಲಿ ಬೆಳಗ್ಗೆ 8 ಗಂಟೆಗೆ ಸರಿಯಾಗಿ ನಮಾಜ್ ನಡೆಯಲಿದೆ. ಕೆಲವೆಡೆ ಅರ್ಧ ಮುಕ್ಕಾಲು ಗಂಟೆ ಹೆಚ್ಚುಕಮ್ಮಿಯಾದರೂ, ಒಂದೇ ಸಮಯಕ್ಕೆ ಅಲ್ಲಾಹ್ ನಿಗೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ವೈ. ಅಬ್ದುಲ್ಲ ಕುಂಞಿ ಹೇಳಿದ್ದಾರೆ.
ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಅಥವಾ ಈದ್ ಉಲ್ ಜುಹಾ ಸಂಭ್ರಮದ ಜೊತೆಗೆ ಮಾಂಸಾಹಾರ ಭಕ್ಷ್ಯಗಳ ಪುಷ್ಕಳ ಭೋಜನಕ್ಕೂ ಹೆಸರುವಾಸಿ.
ಆದರೆ, ಬೆಲೆ ಏರಿಕೆ ಹಬ್ಬದ ಸಂಭ್ರಮಕ್ಕೆ ಕೊಂಚ ಹೊಡೆತ ಬಿದ್ದಿದೆ. ಪ್ರತಿ ಬಾರಿಗಿಂತಲೂ ಈ ಬಾರಿ ಮಟನ್ ದರ ಹೆಚ್ಚಾಗಿದೆ. ಶಿವಾಜಿನಗರದ ಕರ್ನಾಟಕ ಮಟನ್ ಸ್ಟಾಲ್ ನ ಸೋಮವಾರದ ದರದಂತೆ ಕೆ.ಜಿ ಕುರಿ ಮಾಂಸಕ್ಕೆ 250 ರಿಂದ 400 ರ ತನಕ ಇದ್ದು ಹಬ್ಬ ಹತ್ತಿರವಾಗುತ್ತಿದ್ದಂತೆ 450ರು. ತನಕ ಏರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಇದರಲ್ಲಿ ಒಂದು ಅನುಕೂಲವೆಂದರೆ, ಕಾಲು, ತಲೆ ಹೀಗೆ ಅಂಗ ಅಂಗಗಳಿಗೆ ಬೇರೆ ಬೇರೆ ರೇಟ್ ಇದೆ. ಕಾಲಿನ ಮಾಂಸಕ್ಕೆ 50-100 ರು, ತಲೆ ಮಾಂಸಕ್ಕೆ 110-150 ರು, ಬೋಟಿ ಮಾಂಸಕ್ಕೆ 70-100 ರು ಇದೆ.
ಈ ಬಾರಿ ಕುರಿ ವ್ಯಾಪಾರ ಜೋರಾಗಿದ್ದು, ತಮಿಳುನಾಡಿನಿಂದಲೂ ಬೇಡಿಕೆ ಬಂದಿದೆ ಎಂದು ರಾಜ್ಯ ಮಟನ್ ಮರ್ಚೆಂಟ್ ಅಸೋಷಿಯೇಷನ್ ಅಧ್ಯಕ್ಷ ಇಕ್ಬಾಲ್ ಹೇಳುತ್ತಾರೆ. ಬಕ್ರಾಗಳ ಬೆಲೆ 4 ರಿಂದ 5 ಸಾವಿರ ರೂ ದಾಟುವ ನಿರೀಕ್ಷೆಯಿದೆ. ಬನ್ನೂರು, ಬಿಜಾಪುರ ಅಮಿನಗಢ, ಬಳ್ಳಾರಿಯ ಚಿಣ್ಣೂರು ಹಾಗೂ ಹಾವೇರಿ ತಳಿ ಕುರಿಗಳಿಗೆ ಬೇಡಿಕೆ ಬಂದಿದೆಯಂತೆ.
ಚಾಮರಾಜಪೇಟೆಯಲ್ಲಿ ವ್ಯಾಪಾರ ಜೋರು: ಬೆಲೆ ಏರಿಕೆ ಬಿಸಿಯ ನಡುವೆ ಬಕ್ರೀದ್ ಗಾಗಿ ಬಕ್ರಾಗಳ ಖರೀದಿ ಜೋರಾಗಿ ನಡೆದಿದೆ. ಪ್ರತಿ ಬಾರಿ ಬೇಡಿಕೆಯಲ್ಲಿರುತ್ತಿದ್ದ ಶಾರುಖ್ ಬಕ್ರಾ ಈ ಬಾರಿ ಬೇಡಿಕೆ ಕಳೆದುಕೊಂಡಿದ್ದು, 'ಸಲ್ಮಾನ್ ಖಾನ್' ಹೆಸರಿನ ಬಕ್ರಾಗೆ ಬೇಡಿಕೆ ಹೆಚ್ಚಿದೆ.ಸುಮಾರು 100-200 ಕೆಜಿ ತೂಕುವ ಬಕ್ರಾಗಳ ಬೆಲೆ ಲಕ್ಷ ರೂ ತನಕ ಏರಿಕೆಯಾಗುತ್ತಲೇ ಇದೆ.
ಈ ನಡುವೆ ದೂರದಲ್ಲಿ ದೆಹಲಿಯಲ್ಲಿ ಸೈಫ್ ಹಾಗೂ ಕರೀನಾ ಹೆಸರಿನ ಜೋಡಿ ಮೇಕೆಗಳು(ಮೇವಾತಿ ತಳಿ) ತಲಾ 200 ಕೆಜಿ ತೂಕುತ್ತಿದ್ದು, ತಲಾ 2.5 ಲಕ್ಷ ರು. ನಂತರ ಒಟ್ಟಾರೆ ಚೌಕಾಸಿ ನಂತರ 4 ಲಕ್ಷಕ್ಕೆ ಮಾರಾಟವಾಗಿದೆ ಎಂಬ ಸುದ್ದಿ ಬಂದಿದೆ.
ಏನಾದರೂ ಅಲ್ಲಾಹ್ ನ ಪವಿತ್ರ ಚಿನ್ಹೆಯ ಆಕಾರ ಪಡೆದ ಮೇಕೆಗಳ ಬೇಡಿಕೆ ಮಾತ್ರ ತಗ್ಗಿಲ್ಲ ಎಂದು ವ್ಯಾಪಾರಿ ಮಹಮ್ಮದ್ ಅಕ್ರಂ ಒನ್ ಇಂಡಿಯಾ ಕನ್ನಡ ಪ್ರತಿನಿಧಿಗೆ ಹೇಳಿದ್ದಾರೆ.