ಯಡಿಯೂರಪ್ಪ ಬಿಜೆಪಿ ಬಿಡೋ ಪ್ರಶ್ನೆ ಇಲ್ಲ: ಕಟ್ಟಾ
ಯಡಿಯೂರಪ್ಪ
ತೊರೆಯುವ
ಪ್ರಶ್ನೆಯೇ
ಇಲ್ಲ
ಎಂದು
ರಾಗ
ಹಾಡುವವರ
ಪಟ್ಟಿಗೆ
ಮಾಜಿ
ಸಚಿವ
ಕಟ್ಟಾ
ಸುಬ್ರಹ್ಮಣ್ಯ
ನಾಯ್ಡು
ಹೊಸದಾಗಿ
ಸೇರ್ಪಡೆಗೊಂಡಿದ್ದಾರೆ,
ಗುರುವಾರ
ಸುದ್ದಿಗಾರರೊಂದಿಗೆ
ಮಾತನಾಡಿ,
ಎಲ್ಲ
ಪಕ್ಷಗಳಲ್ಲಿ
ಗೊಂದಲಗಳು
ಇರುವಂತೆ
ಬಿಜೆಪಿಯಲ್ಲಿಯೂ
ಇವೆ.
ಇಂತಹ
ಗೊಂದಲಗಳನ್ನು
ನಿವಾರಿಸಲು
ಹಿರಿಯ
ನಾಯಕರು
ಮನವೊಲಿಸುವ
ಕೆಲಸ
ಮಾಡುತ್ತಾರೆ.
ಬಿಜೆಪಿಯನ್ನು
ನಾಲ್ಕು
ದಶಕಗಳ
ಕಾಲ
ಕಟ್ಟಿ
ಬೆಳೆಸಿದ
ಹಿರಿಯ
ನಾಯಕರಾಗಿರುವ
ಯಡಿಯೂರಪ್ಪನವರಿಗೆ
ಅನೇಕ
ಅಸಮಾಧಾನಗಳು
ಉಂಟಾಗಿರುವುದು
ಸಹಜ.
ಹೊಸ ಪಕ್ಷ ಕಟ್ಟುತ್ತಾರೆ ಎನ್ನುವ ಮಾಧ್ಯಮಗಳ ವರದಿ ಬಹುತೇಕ ಸತ್ಯಕ್ಕೆ ದೂರವಾದ ಸಂಗತಿ. ಯಡಿಯೂರಪ್ಪ ಹಾಗೂ ಉಳಿದ ಶಾಸಕರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಎಲ್ಲರೂ ಬಿಜೆಪಿಯಲ್ಲಿಯೇ ಇದ್ದುಕೊಂಡು ಸಾಮೂಹಿಕ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿದ್ದು, ಪಕ್ಷಕ್ಕೆ ಅವರ ಸೂಕ್ತ ಮಾರ್ಗದರ್ಶನ ಅವಶ್ಯವಾಗಿದೆ. ಮುಂದಿನ ಚುನಾವಣೆ ಎದುರಿಸಲು ಬಿಜೆಪಿಗೆ ಯಡಿಯೂರಪ್ಪ ಅವರು ಅನಿವಾರ್ಯ.ಪಕ್ಷದಲ್ಲಿ ಸೂಕ್ತವಾದ ಸ್ಥಾನಮಾನ ನೀಡುವ ಪ್ರಯತ್ನವನ್ನು ಹಿರಿಯ ನಾಯಕರು ಚಿಂತನೆ ನಡೆಸಲಿ ಎಂದು ಕಟ್ಟಾ ನಾಯ್ಡು ಹೇಳಿದ್ದಾರೆ.
ಶೆಟ್ಟರ್ ಹೇಳಿಕೆ: ಹಿರಿಯರಿಗೆ ಬೇಸರವಾಗಿದೆ. ಯಡಿಯೂರಪ್ಪ ಅವರು ಬೈದರೆ ಅದನ್ನೇ ನಾನು ಆಶೀರ್ವಾದ ಎಂದು ತಿಳಿಯುವೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪರೋಕ್ಷವಾಗಿ ವಿನಮ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ಹಿರಿಯರು. ಅವರಿಗೆ ಬೇಸರವಾಗಿ ಮಾತನಾಡಿದ್ದಾರೆ. ಅದನ್ನು ನಾನು ಆಶೀರ್ವಾದ ಎಂದು ತಿಳಿಯುವೆ.
ಇದಕ್ಕಿಂತ ನಾನು ಹೆಚ್ಚಿಗೆ ಮಾತನಾಡಲಾರೆ ಎಂದರು. ಮಾಜಿ ಸಿಎಂ ಡಿ.ವಿ.ಸದಾನಂದಗೌಡರ ದಾರಿಯಲ್ಲಿ ಮುನ್ನಡೆಯುವ ಕುರಿತು, ಪೌರಾಡಳಿತ ಸಚಿವ ಬಾಲಚಂದ್ರ ಜಾರಿಕಿಹೊಳಿಯವರಿಗೆ ಹೆಚ್ಚುವರಿ ಖಾತೆ, ಧನಂಜಯಕುಮಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿರುವ ಕುರಿತು ಉತ್ತರಿಸಲು ಶೆಟ್ಟರ್ ನಿರಾಕರಿಸಿದರು.