ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೋರ್ಟ್ ಎದುರಿಗೆ ಅಪ್ಪಿ ಗಳಗಳನೆ ಅತ್ತ ರೆಡ್ಡಿ ಬ್ರದರ್ಸ್
ಜಾಮೀನು ಖರೀದಿ ಪ್ರಕರಣದಲ್ಲಿ ಇಂದು ಹೈದರಾಬಾದಿನ ಚೆರ್ಲಪಲ್ಲಿಯಲ್ಲಿರುವ ACB ಕೋರ್ಟಿನಲ್ಲಿ ವಿಚಾರಣೆ ನಿಗದಿಯಾಗಿತ್ತು. ತತ್ಸಂಬಂಧ ಆರೋಪಿಗಳಾಗಿರುವ ಜನಾರ್ದನ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಕೋರ್ಟಿಗೆ ಹಾಜರಾದರು. ACB ಪೊಲೀಸರು ಆರೋಪಿಗಳನ್ನು ಪ್ರತ್ಯೇಕವಾಗಿ ಕೋರ್ಟಿಗೆ ಕರೆತಂದರು. ಆ ಸಂದರ್ಭದಲ್ಲಿ ಕೋರ್ಟಿನೊಳಕ್ಕೆ ಹೆಜ್ಜೆಹಾಕುವ ಮುನ್ನ ರೆಡ್ಡಿ ಬ್ರದರ್ಸ್ ಪರಸ್ಪರ ಸಂಧಿಸಿದ್ದಾರೆ.
ಅನೇಕ ದಿನಗಳ ನಂತರ ಹೀಗೆ ಪರಸ್ಪರ ಕಾಣಿಸಿಕೊಳ್ಳುತ್ತಿದ್ದಂತೆ ರೆಡ್ಡಿ ಸೋದರರು ಒಬ್ಬರನ್ನೊಬ್ಬರು ಅಪ್ಪಿಕೊಂಡು, ಗದ್ಗದಿತರಾದರು. ಎಲ್ಲ ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸುವಂತೆ ACB ನ್ಯಾಯಾಲಯ ಸೆ. 14ರಂದು ಆದೇಶ ನೀಡಿತ್ತು. ಅದರಂತೆ ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿತು.
Comments
ಸೋಮಶೇಖರ ರೆಡ್ಡಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಹೈದರಾಬಾದ್ ಮಾನವೀಯತೆ ಕ್ರೈಂ illegal mining cbi janardhana reddy bribe somashekar reddy
English summary
Illegal Mining Bailgate - As Janardhan Reddy and Somashekhar Reddy appaered in ACB Court today (Sept 25) regarding First FIR filed by ACB in Bailgate both hugged together and wept in court silence.