ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕಾಲ ಯೋಜನೆಯಡಿಗೆ ಇನ್ನೂ 14 ಇಲಾಖಾ ಸೇವೆ

By Prasad
|
Google Oneindia Kannada News

Sakala services 14 more added
ಬೆಂಗಳೂರು, ಸೆ. 21 : ಸಕಾಲ ಯೋಜನೆಯಡಿ ಈಗಿರುವ 151 ಸೇವೆಗಳ ಜೊತೆಗೆ ಇನ್ನೂ 14 ಇಲಾಖೆಗಳನ್ನು ಸೇರ್ಪಡಿಸಿ ಒಟ್ಟು 265 ಸೇವೆಗಳನ್ನು ಸಕಾಲ ಯೋಜನೆಯಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ ಅವರು ವಿವರ ನೀಡಿದರು.

ನಗರದ ಓಕಳಿಪುರಂ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ 8 ಪಥದ ಕಾರಿಡಾಡ್ ಸಿಗ್ನಲ್ ಫ್ರೀ ಅಂಡರ್‌ಪಾಸ್ ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸುಮಾರು 102 ಕೋಟಿ ವೆಚ್ಚದಲ್ಲಿ, 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

ತಾವರೆಕೆರೆ ಹೋಬಳಿ (ಸುಬ್ಬರಾಯನವಾಡ) ಗ್ರಾಮದ ಹತ್ತಿರ ಸಂಪೂರ್ಣ ಘನ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ 10 ಎಕರೆ ಜಾಗವನ್ನು 20 ವರ್ಷ ಅವಧಿಗೆ ಅಂಜಿರ್ ಬಯೋಟೆಕ್ ಇಂಜಿನಿಯರ್ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯದ ಪಾರ್ವಡ, ತೀರ್ಥಹಳ್ಳಿ, ಹೊಸನಗರ, ಶೃಂಗೇರಿ, ಮೂಡಿಗೆರೆ, ಕೊಪ್ಪ, ಕಾರ್ಕಳ, ಕುಂದಾಪುರ, ಬೆಳ್ತಂಗಡಿ ತಾಲ್ಲೂಕುಗಳನ್ನು ನಕ್ಸಲ್ ಪೀಡಿತ ತಾಲ್ಲೂಕುಗಳೆಂದು ಗುರುತಿಸಿದ್ದು ಪ್ರತಿ ತಾಲ್ಲೂಕುಗಳಿಗೆ 5 ಕೋಟಿ ರು. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಇಂದಿನ ಸಚಿವ ಸಂಪುಟ ಅನುಮೋದನೆ ನೀಡಿತು.

English summary
14 more services were brought under Karnataka Guarantee of Services to Citizens Act, 2011, which is also known as Sakala. This important decision was taken by BJP govt under the leadership of Jagadish Shettar on September 21, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X