ನೌಕರರಿಗೆ ಗಣೇಶ ಹಬ್ಬದ ಗಿಫ್ಟ್ ಘೋಷಣೆ: ಅಶೋಕ್
4 ರಿಂದ 7 ಸಾವಿರ ರು ವೇತನ ಹೆಚ್ಚಳ ಮಾಡಲಾಗುತ್ತದೆ. ನಗದು ರೂಪದಲ್ಲಿ 2 ಸಾವಿರ ರು ಅರಿಯರ್ಸ್ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ಹೇಳಿದ್ದಾರೆ. ಸಾರಿಗೆ ಸಂಸ್ಥೆ ಎಂಡಿ ಮಂಜುನಾಥ್ ಪ್ರಸನ್ನ ಅವರು ಬೆಳಗ್ಗೆ ಕೊಟ್ಟ ಹೇಳಿಕೆಯನ್ನೇ ಅಶೋಕ್ ಅವರು ಪುನರುಚ್ಚರಿಸಿದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ನೌಕರರ ಸಂಘಟನೆ ಮುಖಂಡ ಅನಂತಸುಬ್ಬರಾವ್, ಬರೀ ಬಾಯಿ ಮಾತಿನ ಹೇಳಿಕೆಯಿಂದ ಪ್ರಯೋಜನವಿಲ್ಲ. ಲಿಖಿತ ರೂಪದಲ್ಲಿ ನೌಕರರೊಡನೆ ಒಪ್ಪಂದ ಮಾಡಿಕೊಳ್ಳಬೇಕು. ಇದು ನಿನ್ನೆ ಮೊನ್ನೆಯ ಕತೆಯಲ್ಲ 16 ವರ್ಷದ ಆಕ್ರೋಶ ಹೊರ ಬಿದ್ದಿದೆ.
ಸಾರಿಗೆ ಸಚಿವರು ಮೊದಲಿಗೆ ನೌಕರರ ಸಮಸ್ಯೆ ಆಲಿಸುವುದನ್ನು ಕಲಿಯಲಿ ನಂತರ ಕಾನೂನು ಪಾಲನೆ ಬಗ್ಗೆ ನಮಗೆ ತಿಳಿಸಲಿ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಕೆಎಸ್ಸಾರ್ಟಿಸಿ ನೌಕರರ ಸಂಘದ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ, ಬಂದ್ ಕರೆ ನೀಡಿರುವ ಪ್ರಮುಖ ನಾಲ್ಕು ನೌಕರರ ಸಂಘದ ಹಿರಿಯ ಅಧಿಕಾರಿಗಳು ಖಾಸಗಿ ಮಾಧ್ಯಮಗಳ ಸ್ಟುಡಿಯೋದಲ್ಲಿರುವಾಗ ಯಾರ ಜೊತೆ ಅಶೋಕ್ ಅವರು ಚರ್ಚೆ ನಡೆಸಿದ್ದಾರೆ ಎಂದು ನೌಕರರು ಪ್ರಶ್ನಿಸಿದ್ದಾರೆ.
ಸಾರಿಗೆ ಸಂಚಾರ ಸುಗಮ: ಕೇವಲ ಶೇ 20 ರಷ್ಟು ಮಾತ್ರ ಬಸ್ ಗಳು ಸಂಚಾರ ನಿಲ್ಲಿಸಿದೆ. ಉಳಿದಂತೆ ಸಂಚಾರ ಸುಗಮವಾಗಿದೆ. ಮುಷ್ಕರ ನಡೆಸುತ್ತಿರುವವರು ಸಂಸ್ಥೆಯ ನೌಕರರೇ ಅಲ್ಲ ಎಂದು ಆರ್ ಅಶೋಕ್ ಅವರು ಸ್ಪಷ್ಟಪಡಿಸಿದ್ದಾರೆ.[ ಲೈವ್ : ಅಲ್ಲಲ್ಲಿ ಒಟ್ಟು 110 ಬಸ್ ಮಾತ್ರ ಸಂಚಾರ]