ರಾಸಲೀಲೆ: ಆರತಿರಾವ್ ಗೆ ತಾತ್ಕಾಲಿಕ ಜಾಮೀನು
ಶುಕ್ರವಾರ (ಸೆ 7) ರಾಮನಗರ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಆರತಿ ರಾವ್ ತಮ್ಮ ವಕೀಲರೊಂದಿಗೆ ಹಾಜರಾದರು.
ಈ ಪ್ರಕರಣದ ಹಿನ್ನಲೆಯಲ್ಲಿ ಆರತಿ ರಾವ್ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ ರುದ್ರಮುನಿಯವರು ತಾತ್ಕಾಲಿಕ ನಿರೀಕ್ಷಣಾ ಜಾಮೀನು ನೀಡಿದ್ದಲ್ಲದೆ ಸೆಪ್ಟಂಬರ್ 13ರೊಳಗೆ ಕಾಯಂ ನಿರೀಕ್ಷಣಾ ಜಾಮೀನನ್ನು ಸಂಬಂಧಪಟ್ಟ ಜೆ ಎಂ ಎಫ್ ಸಿ ನ್ಯಾಯಾಲಯದಿಂದ ಪಡೆಯುವಂತೆ ಸೂಚಿಸಿದ್ದಾರೆ.
ಬಿಡದಿ ನಿತ್ಯಾನಂದ ಸ್ವಾಮೀಜಿಯ ಶಿಷ್ಯರು ಹಾಗೂ ರಂಜಿತಾ ಸೇರಿದಂತೆ ರಾಸಲೀಲೆ ಸಿಡಿ ತಯಾರಿಕಾ ಪ್ರಕರಣದಲ್ಲಿ ಲೆನಿನ್ ಮತ್ತು ಆರತಿ ರಾವ್ ಅವರ ಕೈವಾಡವಿದೆ ಎಂದು ರಾಮನಗರ ನ್ಯಾಯಾಲಯದಲ್ಲಿ ಕೇಸು ದಾಖಲು ಮಾಡಿದ್ದರು.
2010ರಲ್ಲಿ ನಟಿ ರಂಜಿತಾ ಜತೆಗಿನ ರಾಸಲೀಲೆ ಪ್ರಕರಣ ಬಹಿರಂಗವಾಯಿತು. ಅದಾದ 15 ತಿಂಗಳ ತರುವಾಯ ರಾಸಲೀಲೆ ಸಿ.ಡಿ.ಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಆರತಿ ರಾವ್ ನನಗೆ ಬೆದರಿಸಿ, ಕೋಟಿಗಟ್ಟಲೆ ಹಣದ ಬೇಡಿಕೆಯಿಟ್ಟಿದ್ದಳು ಎಂದು ನಿತ್ಯಾನಂದ ಸ್ವಾಮಿ, ಆರತಿ ರಾವ್ ಮೇಲೆ ದೂರು ದಾಖಲಿಸಿದ್ದರು.
ಅಲ್ಲದೆ ಭಕ್ತೆಯ ಹೆಸರಿನಲ್ಲಿ ಆಶ್ರಮದಲ್ಲಿ ಕಲಿಸುವ ಯೋಗ, ಧ್ಯಾನಗಳನ್ನು ಕಲಿತು ಹೊರಜಗತ್ತಿನಲ್ಲಿ ಖಾಸಗಿ ಶಾಲೆಗಳನ್ನು ನಡೆಸಿ, ಹಣ ಗಳಿಸಿದ್ದಾಳೆ ಎಂದು ಚೆನ್ನೈನಲ್ಲಿ ನಿತ್ಯಾನಂದ ಕೇಸು ದಾಖಲಿಸಿದ್ದಾನೆ.