ಮಮತಾ, ವಿನಯ್ ಗೆ ಏಕಲವ್ಯ ಪ್ರಶಸ್ತಿ ಗೌರವ
ಜೀವಮಾನದ ಸಾಧನೆಗಾಗಿ ಹಿರಿಯ ಕ್ರೀಡಾಪಟುಗಳಿಗೂ ಇದೇ ಸಂದರ್ಭದಲ್ಲಿ ಪ್ರಶಸ್ತಿ ಘೋಷಿಸಲಾಗಿದೆ. ಏಕಲವ್ಯ ಪ್ರಶಸ್ತಿ ವಿಜೇತರಿಗೆ 2 ಲಕ್ಷ ರು ನಗದು ಬಹುಮಾನ, ಬೆಳ್ಳಿ ಫಲಕ, ಪ್ರಮಾಣ ಪತ್ರ ದೊರೆಯಲಿದೆ. ಮಹಿಳಾ ಅಥ್ಲೀಟ್ ಗಳಿಗೆ ಪ್ರಶಸ್ತಿ ಫಲಕದ ಜೊತೆಗೆ ಮೈಸೂರು ರೇಷ್ಮೆ ಸೀರೆ ನೀಡಿ ಗೌರವಿಸಲಾಗುತ್ತದೆ. ಪುರುಷ ಕ್ರೀಡಾಪಟುಗಳಿಗೆ ಸೂಟ್ ದಿರಿಸು ನೀಡಲಾಗುತ್ತದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.
*
ವಿನಯ್
ಕುಮಾರ್-ಕ್ರಿಕೆಟ್
*
ಪ್ರತೀಕ್
ರಾಜ್
-ರೋಲರ್
ಸ್ಕೇಟಿಂಗ್
*
ರಾಕೇಶ್
ಮನ್ಪತ್-
ಶೂಟಿಂಗ್
*
ಸಾಬು
ಈಶ್ವರ್
ಗಾಣೀಗೇರ್-
ಸೈಕ್ಲಿಂಗ್
*
ಕಾಶಿನಾಥ್
ನಾಯ್ಕ್-ಅಥ್ಲೆಟಿಕ್ಸ್
*
ಸ್ಟ್ಯಾನಿ-ಚೆಸ್
*
ಚಿಯಣ್ಣ-ಹಾಕಿ
*
ನೇಹಾ-ಪವರ್
ಲಿಫ್ಟಿಂಗ್
*
ರಾಜಣ್ಣ-ಅಂಗವಿಕಲ
ಅಥ್ಲೀಟ್
*
ಎಚ್
ಚಂದ್ರಶೌರಿ
ದೇವಿ-ವೇಯ್ಟ್
ಲಿಫ್ಟಿಂಗ್
*
ಮಮತಾ
ಪೂಜಾರಿ-ಕಬಡ್ಡಿ
*
ನಾಡಿಯಾ
ಹರಿದಾಸ್
-ಈಕ್ವೆಸ್ಟ್ರಿಯನ್
*
ಕೃತಿಕಾ
ಲಕ್ಷ್ಮಣ್-
ಬಾಸ್ಕೆಟ್
ಬಾಲ್
*
ಶ್ವೇತಾ
ಎನ್-
ವಾಲಿಬಾಲ್
*
ಎ.ಪಿ.
ಗಗನ್
ಉಲ್ಲಾಳ್
ಮಠ-
ಈಜು
ಕ್ರೀಡಾಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ ಹಾಕಿ ತರಬೇತುಗಾರ ಸಿ.ಯು. ಅಶ್ವಥ್, ವೇಯ್ಟ್ ಲಿಫ್ಟಿಂಗ್ ತರಬೇತುಗಾರ್ತಿ ಶ್ಯಾಮಲಾ ಶೆಟ್ಟಿ ಹಾಗೂ ಸೈಕ್ಲಿಂಗ್ ತರಬೇತಿಗಾರ ಚಂದ್ರಪ್ಪ ಮಲ್ಲಪ್ಪ ಕುರಣಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಪ್ರತಿವರ್ಷ 15 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲು ಅವಕಾಶವಿದೆ. ಆದರೆ, 2010ರಲ್ಲಿ 12 ಜನರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗಿತ್ತು. ಹೀಗಾಗಿ ಬಾಕಿ ಉಳಿದಿದ್ದ 3 ಪ್ರಶಸ್ತಿಗಳಿಗೂ ಈ ಬಾರಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಅಪ್ಪಚ್ಚು ರಂಜನ್ ಹೇಳಿದರು.
ಬೆಳಗಾವಿಯ ರಾಜೇಶ್ ಶಿಂಧೆ (ಅಂಗವಿಕಲ ಕ್ರೀಡಾಪಟು/ ಈಜು), ದಕ್ಷಿಣ ಕನ್ನಡ ಜಿಲ್ಲೆಯ ರೋಷನ್ ಫರಾವೋ (ಬಾಡಿ ಬಿಲ್ಡಿಂಗ್) ಹಾಗೂ ಮಂಡ್ಯ ಜಿಲ್ಲೆಯ ಎಸ್.ನವೀನ್ (ಕರಾಟೆ) ಅವರನ್ನು ಆಯ್ಕೆ ಮಾಡಲಾಗಿದೆ.
ಏಕಲವ್ಯ ಪ್ರಶಸ್ತಿಗಾಗಿ ಸುಮಾರು 93 ಅರ್ಜಿಗಳು ಬಂದಿದ್ದವು. ಜೀವಮಾನದ ಪ್ರಶಸ್ತಿಗಾಗಿ ಸುಮಾರು 40 ಅರ್ಜಿಗಳು ಬಂದಿತ್ತು.
ಕ್ರೀಡಾಪಟುಗಳು ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ತೋರಿದ್ದನ್ನು ಪರಿಗಣಿಸಿ ಈ ಬಾರಿ ಏಕಲವ್ಯ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಸಂಪೂರ್ಣವಾಗಿ ಪಾರದರ್ಶಕವಾಗಿದೆ.ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಕ್ಕೆ ಪ್ರತಿಯೊಂದಕ್ಕೂ ಅಂಕಗಳನ್ನು ನಿಗದಿ ಮಾಡಲಾಗಿತ್ತು.
ಈ ಮೂಲಕ ಪ್ರತಿಯೊಂದು ವಿಭಾಗದಲ್ಲೂ ಅತಿ ಹೆಚ್ಚು ಅಂಕಗಳನ್ನು ಪಡೆದ ಕ್ರೀಡಾಪಟುಗಳನ್ನೇ ಆಯ್ಕೆ ಮಾಡಲಾಗಿದೆ. ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಕ್ರೀಡಾ ದಿನವಾದ ಆ.29 ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅಪ್ಪಚ್ಚು ರಂಜನ್ ಹೇಳಿದರು.