ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕೆ ದೇಗುಲಕ್ಕೆ ವಿಜಯ್ ಮಲ್ಯ ಸ್ವರ್ಣದ್ವಾರ ಸಮರ್ಪಣೆ

|
Google Oneindia Kannada News

Golden door to Kukke Temple by Vijay Mallya
ಬೆಂಗಳೂರು, ಆ 23: ಮುಜರಾಯಿ ವ್ಯಾಪ್ತಿಗೆ ಬರುವ ರಾಜ್ಯದ ನಂಬರ್ ಒನ್ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಉದ್ಯಮಿ ವಿಜಯ್ ಮಲ್ಯ ಗುರುವಾರ (ಆ 23) ಚಿನ್ನದ ಬಾಗಿಲನ್ನು ಸಮರ್ಪಿಸಲಿದ್ದಾರೆ.

ಯುಬಿ ಗ್ರೂಪಿನ ಮಾಲೀಕರಾದ ವಿಜಯ್ ಮಲ್ಯ ಕಳೆದ ಎಪ್ರಿಲ್ ತಿಂಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಿನ್ನದ ಬಾಗಿಲನ್ನು ದೇವರಿಗೆ ಅರ್ಪಿಸುವುದಾಗಿ ಸಂಕಲ್ಪ ಮಾಡಿದ್ದರು.

ಸುಮಾರು 80ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಾಲಯದ ಗರ್ಭಗುಡಿಗೆ ಚಿನ್ನದಬಾಗಿಲು ಸಿದ್ದವಾಗಿದ್ದು ಇಂದು ನಾಲ್ಕು ಗಂಟೆ ಸುಮಾರಿಗೆ ದೇವರಿಗೆ ಸಮರ್ಪಣೆಯಾಗಲಿದೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸುಧಾಕರ ಡೊಂಗ್ರೆ ಅವರು ಎರಡೂವರೆ ತಿಂಗಳಿನಿಂದ ಚಿನ್ನದ ಬಾಗಿಲಿನ ಕೆಲಸವನ್ನು ಆರಂಭಸಿದ್ದರು.

ಈ ಚಿನ್ನದ ಬಾಗಿಲನ್ನು ದೇವಾಲಯದ ಗರ್ಭಗುಡಿಯ ಹೊರಗಿನ ಮಂಟಪದ ಬಾಗಿಲಿಗೆ ಹೊದಿಸಲಾಗುವುದು.

ಎಪ್ರಿಲ್ ತಿಂಗಳಲ್ಲಿ ವಿಜಯ್ ಮಲ್ಯ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾಗ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಹೆಸರಾಂತ ದೇಗುಲಕ್ಕೆ ಭೇಟಿ ನೀಡಿದ್ದರು.

ಸುಮಾರು ಎರಡೂವರೆ ಕೆಜಿ ಚಿನ್ನದಲ್ಲಿ ಈ ಸ್ವರ್ಣ ಬಾಗಿಲು ನಿರ್ಮಾಣವಾಗಿದೆ.

English summary
Vijay Mallya will offer a pair of gold-plated doors to the deity at the Subramanya temple, Kukke at 4 pm on Thursday (23.08.12).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X