ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಕ್ಕೆ ದೇಗುಲಕ್ಕೆ ವಿಜಯ್ ಮಲ್ಯ ಸ್ವರ್ಣದ್ವಾರ ಸಮರ್ಪಣೆ
ಯುಬಿ ಗ್ರೂಪಿನ ಮಾಲೀಕರಾದ ವಿಜಯ್ ಮಲ್ಯ ಕಳೆದ ಎಪ್ರಿಲ್ ತಿಂಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಿನ್ನದ ಬಾಗಿಲನ್ನು ದೇವರಿಗೆ ಅರ್ಪಿಸುವುದಾಗಿ ಸಂಕಲ್ಪ ಮಾಡಿದ್ದರು.
ಸುಮಾರು 80ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಾಲಯದ ಗರ್ಭಗುಡಿಗೆ ಚಿನ್ನದಬಾಗಿಲು ಸಿದ್ದವಾಗಿದ್ದು ಇಂದು ನಾಲ್ಕು ಗಂಟೆ ಸುಮಾರಿಗೆ ದೇವರಿಗೆ ಸಮರ್ಪಣೆಯಾಗಲಿದೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸುಧಾಕರ ಡೊಂಗ್ರೆ ಅವರು ಎರಡೂವರೆ ತಿಂಗಳಿನಿಂದ ಚಿನ್ನದ ಬಾಗಿಲಿನ ಕೆಲಸವನ್ನು ಆರಂಭಸಿದ್ದರು.
ಈ ಚಿನ್ನದ ಬಾಗಿಲನ್ನು ದೇವಾಲಯದ ಗರ್ಭಗುಡಿಯ ಹೊರಗಿನ ಮಂಟಪದ ಬಾಗಿಲಿಗೆ ಹೊದಿಸಲಾಗುವುದು.
ಎಪ್ರಿಲ್ ತಿಂಗಳಲ್ಲಿ ವಿಜಯ್ ಮಲ್ಯ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾಗ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಹೆಸರಾಂತ ದೇಗುಲಕ್ಕೆ ಭೇಟಿ ನೀಡಿದ್ದರು.
ಸುಮಾರು ಎರಡೂವರೆ ಕೆಜಿ ಚಿನ್ನದಲ್ಲಿ ಈ ಸ್ವರ್ಣ ಬಾಗಿಲು ನಿರ್ಮಾಣವಾಗಿದೆ.
Comments
English summary
Vijay Mallya will offer a pair of gold-plated doors to the deity at the Subramanya temple, Kukke at 4 pm on Thursday (23.08.12).