ಜೋಳದರಾಶಿ ಶಾಂತಾ ಸಂಸತ್ ಸದಸ್ಯತ್ವ ಸೆ.15ಕ್ಕೆ ಕೊನೆ?
ಮತ ಮರುಎಣಿಕೆ: ಏನಪಾ ಅಂತಹ ಆತಂಕದ ವಿಚಾರವೆಂದರೆ ಬಿಜೆಪಿ ಪಕ್ಷದ ಜೆ. ಶಾಂತಾರ ಸಂಸತ್ ಸದಸ್ಯತ್ವ ಸೆ. 15ಕ್ಕೆ ಕೊನೆಗೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಏಕೆಂದರೆ, ಬಳ್ಳಾರಿ ಲೋಕಸಭಾ ಕ್ಷೇತ್ರದ ಮತಗಳ ಮರುಎಣಿಕೆ ಕಾರ್ಯವನ್ನು ಕೋರ್ಟ್ ಆದೇಶದಂತೆ ಸೆಪ್ಟೆಂಬರ್ 15ರಂದು ನಡೆಸಲು ಅವಕಾಶ ನೀಡುವಂತೆ ಜಿಲ್ಲಾಡಳಿತವು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಮತಗಳ ಮರುಎಣಿಕೆಗೆ ಆದೇಶ ನೀಡಿದ್ದ ಹೈಕೋರ್ಟ್ ತೀರ್ಪನ್ನು ಸಂಸದೆ ಶಾಂತಾ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆದರೆ ಮೇಲ್ಮನವಿಯನ್ನು ತಿರಸ್ಕರಿಸಿಸ ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಅಲ್ಲದೇ, ಹೈಕೋರ್ಟ್ ಬಯಸಿರುವಂತೆ ನಾಲ್ಕು ವಾರಗಳೊಳಗೆ ಮರು ಮತಎಣಿಕೆ ಮಾಡುವಂತೆಯೂ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಎಲ್ಲ ಸಿದ್ಧತೆಗಳನ್ನೂ ಪೂರ್ಣಗೊಳಿಸಲಾಗಿದ್ದು, ಸೆಪ್ಟೆಂಬರ್ 15 ರಂದು ಮರುಎಣಿಕೆ ನಡೆಸಲು ಅನುಮತಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
2009ರ ಏಪ್ರಿಲ್ನಲ್ಲಿ ನಡೆದಿದ್ದ 13ನೇ ಲೋಕಸಭೆ ಚುನಾವಣೆಯಲ್ಲಿ 2,243 ಮತಗಳ ಅಂತರದಿಂದ ಕಾಂಗ್ರೆಸ್ನ ಎನ್.ವೈ. ಹನುಮಂತಪ್ಪ ಸೋತಿದ್ದರು. ದಿಢೀರನೆ ಗೊಂದಲದ ವಾತಾವರಣ ಮೂಡಿದಾಗ ಕೊನೆಯ ಎರಡು ಸುತ್ತಿನ ಎಣಿಕೆ ಕಾರ್ಯ ನಡೆಸದೆಯೇ ಫಲಿತಾಂಶ ಘೋಷಿಸಲಾಗಿತ್ತು. ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಏಜೆಂಟ್ ಆಗಿದ್ದ ಚಂದ್ರಗೌಡ ಎಂಬುವವರು ಅಕ್ರಮ ನಡೆದಿರುವ ಕುರಿತು ಹೈಕೋರ್ಟ್ಗೆ ದೂರು ಸಲ್ಲಿಸಿದ್ದರು.