ಹಾವಿಗೆ ಹಾಲು ಎರೆಯುತ್ತೀರಾ? ಪ್ಲೀಸ್ ಗಮನಿಸಿ
ನಾಗರಪಂಚಮಿಯಂದು ನಾಗದೇವತೆಯನ್ನು ಪೂಜಿಸಬೇಕು. ಆದರೆ ಜೀವಂತ ಹಾವುಗಳನ್ನು ಹಿಡಿದು ಪೂಜೆಯ ನೆಪದಲ್ಲಿ ಅವುಗಳಿಗೆ ಹಾಲು ಮತ್ತು ಇತರ ವಸ್ತುಗಳನ್ನು ಎರೆದು ಹಿಂಸಿಸಲಾಗುತ್ತಿದೆ. ಈ ಬಗ್ಗೆ ಪುರಾಣದಲ್ಲೂ ಉಲ್ಲೇಖವಿಲ್ಲ. ನಿಮ್ಮ ಶಕ್ತ್ಯಾನುಸಾರ ಪೂಜೆ ಮಾಡಿ ಎಂದಿದೆ. ಜೀವಂತ ಹಾವನ್ನು ಬಳಸಿ ಪೂಜೆ ಸಲ್ಲಿಸುವ ಬಗ್ಗೆ ಸಾರ್ವಜನಿಕರು ಯೋಚಿಸುವುದು ಒಳ್ಳೆಯದು.
ಈ ಕೃತ್ಯ 1972 ರ ವನ್ಯಜೀವಿ ರಕ್ಷಣಾ ಕಾಯ್ದೆ ಅನ್ವಯ ಕೂಡಾ ಹಾವುಗಳನ್ನು ಬೇಟೆಯಾಡುವುದು, ಹಿಂಸಿಸುವುದು ಮತ್ತು ದುರ್ಬಳಕೆ ಮಾಡಿಕೊಳ್ಳುವುದಕ್ಕೆ. ಸಮನಾಗಿರುತ್ತದೆ. ಹಾಗಿದ್ದರೂ ಹಾವುಗಳನ್ನು ಉಸಿರುಗಟ್ಟಿಸುವ ಚೀಲಗಳಲ್ಲಿ ತುರುಕಿಸಿ ಚಿಕ್ಕ ಪೆಟ್ಟಿಗೆಗಳಲ್ಲಿ ಇಡಲಾಗುತ್ತದೆ. ಅಲ್ಲದೆ ಅವುಗಳನ್ನು ಉಪವಾಸ ಕೆಡವಲಾಗುತ್ತಿದೆ. ಅವುಗಳ ಹಲ್ಲುಗಳನ್ನು ಹಿಂಸಾತ್ಮಕವಾಗಿ ಕೀಳಲಾಗುತ್ತಿದೆ. ಹಾವಾಡಿಗರು ಅನೇಕ ಹಾವುಗಳ ಬಾಯಿಯನ್ನೇ ಹೊಲಿದುಹಾಕುತ್ತಾರೆ ಎಂದು ಪೆಟಾ ದೂರಿದೆ.
ಹಾವಾಡಿಗರು ಹಾವುಗಳನ್ನು ಆಡಿಸುವುದರಿಂದ ನಾಗರಪಂಚಮಿ ಹಬ್ಬವನ್ನು ಅಣಕಿಸಿದಂತಾಗುತ್ತದೆ ಎಂದು ಪೆಟಾ ಇಂಡಿಯಾದ ಸಂಚಾಲಕ ಚಾನಿ ಸಿಂಗ್ ಹೇಳಿದ್ದಾರೆ. ಹಾವಿನ ಹಣೆಗೆ ತಿಲಕ ಇಡುವುದರಿಂದ ಅದು ಕುರುಡಾಗುತ್ತದೆ. ಹಾವಿನ ಗಂಟಲಿಗೆ ಹಾಲು ಎರೆಯಲು ಹೋಗಿ ಅದರ ಪ್ರಾಣಕ್ಕೆ ಕುತ್ತು ತರಲಾಗುತ್ತದೆ. ಜು.23 ರ ಸೋಮವಾರದಂದು ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.