ಯುಪಿಎ2: ಕಾಂಗ್ರೆಸ್ ಮೈತ್ರಿ ಧರ್ಮವ ಪಾಲಿಸುತ್ತಿಲ್ಲವೇ?
ತಾಜಾ ಆಗಿ, NCP ಸಚಿವರಾದ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಅವರ ದಿಢೀರ್ ಬಂಡಾಯ ಮತ್ತು ತದನಂತರವೂ ಮುಂದುವರಿದ ಬಹಿರಂಗ ದಾಳಿಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷವು ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲವೇ ಎಂಬ ಬಲವಾದ ಅನುಮಾನ ಕಾಡುತ್ತಿದೆ.
ಇಷ್ಟಕ್ಕೂ ಶರದ್ ಪವಾರ್ ಬಂಡಾಯವೆದ್ದಿದ್ದು ಸಕಾರಣವಾಗಿಯೇ ಇದೆ. ಏಕೆಂದರೆ ಪ್ರಣಬ್ ದಾ ನಿರ್ಗಮನದ ಪ್ರಧಾನಿಯ ಪಕ್ಕ ಕುಳಿತುಕೊಳ್ಳುವ ಆರ್ಹತೆಯಿದ್ದುದು ಮತ್ತು ಆ ಸ್ಥಾನವನ್ನು ತುಂಬ ಬೇಕಾದ ಅರ್ಹತೆಯಿರುವುದು ಶರದ್ ಪವಾರ್ ಗೆ ಎಂಬುದು ನಿರ್ವಿವಾದ ಎನ್ನುತ್ತಾರೆ NCP ನಾಯಕರು.
ಆದರೆ ಕಾಂಗ್ರೆಸ್ ನಾಯಕರು ಹೇಳುವುದೇ ಬೇರೆ. NCP ಪಕ್ಷದಲ್ಲಿ ಕೇವಲ 9 ಸಂದರು ಇದ್ದಾರೆ. ಅದೇ ಕಾಂಗ್ರೆಸ್ UPAದಲ್ಲಿ ಅಗ್ರ ಸ್ಥಾನದಲ್ಲಿದೆ. ಹಾಗಾಗಿ, ಸರಕಾರದಲ್ಲಿ ಎರಡನೆಯ ಸ್ಥಾನವೂ ನಮಗೇ ದಕ್ಕಬೇಕು. ಅದರಂತೆ ಎಕೆ ಆಂಟನಿ ಪ್ರಧಾನಿ ಪಕ್ಕ ಕುಳಿತಿದ್ದಾರೆ ಎಂಬ ವಾದವನ್ನು ಮಂಡಿಸುತ್ತಾರೆ ಕಾಂಗ್ರೆಸ್ಸಿನವರು.
ಹಾಗೆ
ನೋಡಿದರೆ
UPAದಲ್ಲಿ
ಮೈತ್ರಿ
ಧರ್ಮ
ಪಾಲನೆಯಾಗುತ್ತಿಲ್ಲ
ಎಂಬುದು
ಪುರಾತನ
ದೂರು-ದುಮ್ಮಾನ.
ಅದರಲ್ಲೂ
'ಅಲ್ಪ'
ಮೈತ್ರಿಗಳನ್ನು
ಕಂಡರೆ
ಕಾಂಗ್ರೆಸ್ಸಿಗೆ
ಅಷ್ಟಕ್ಕಷ್ಟೇ
ಎಂಬ
ಮಾತಿದೆ.
ತಾಜಾ
ಆಗಿ
ಶರದ್
ಪವಾರ್
ಬಂಡಾಯದ
ಬಾವುಟ
ಹಾರಿಸಿದ್ದು,
ಯುಪಿಎದಲ್ಲಿ
ಎಲ್ಲವೂ
ಸರಿಯಿಲ್ಲ
ಎಂಬುದನ್ನು
ಮತ್ತೊಮ್ಮೆ
ದೃಢಪಡಿಸಿದೆ.
ಗಮನಿಸಿ:
ಸೋನಿಯಾ
ಗಾಂಧಿ
ಅವರ
ವಿದೇಶಿ
ಮೂಲವನ್ನು
ಮುಂದಿಟ್ಟುಕೊಂಡು
ಕಾಂಗ್ರೆಸ್
ತ್ಯಜಿಸಿ,
NCP
ರಚಿಸಿಕೊಂಡಿದ್ದರು.
ಯುಪಿಎ ಪ್ರಧಾನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಣ್ಣ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇತರೆ ಸಚಿವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದರೆ ತಮಗೆ ಆ ಭಾಗ್ಯವಿಲ್ಲ ಎಂಬುದು NCP ಅಧಿನಾಯಕ ಪವಾರರ ಕೂಗು, ಕೊರಗು. ಅಂದಹಾಗೆ, ತೃಣಮೂಲ ಕಾಂಗ್ರೆಸ್ ವಿಷಯದಲ್ಲೂ ಕಾಂಗ್ರೆಸ್ ಪಕ್ಷದ್ದು ಇದೇ ರಗಳೆಯಾಗಿದೆ ಅಲ್ಲವೇ?