ಮುಸ್ಲಿಂ ಸಮಾವೇಶಕ್ಕೆ ಆನ್ ಲೈನ್ ಮೂಲಕ ಆಹ್ವಾನ
ಬೆಂಗಳೂರು, ಜು.13: ಜೆಡಿಎಸ್ ಪಕ್ಷದ ಅಲ್ಪ ಸಂಖ್ಯಾತರ ಸಮಾವೇಶ ಜು.15 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ(ಜು.13) ಹೇಳಿದರು.
ಮುಸ್ಲಿಂ
ಸಮುದಾಯದ
ರಕ್ಷಣೆಗೆ
ಹಾಗೂ
ಬೆಂಬಲಕ್ಕೆ
ಜೆಡಿಎಸ್
ಪಕ್ಷ
ಇದೆ
ಎನ್ನುವುದನ್ನು
ತೋರಿಸಲು
ಈ
ಸಮಾವೇಶ
ನಡೆಸುತ್ತಿರುವುದಾಗಿ
ಹೇಳಿದರು.
ಈ
ಸಮಾವೇಶದಲ್ಲಿ
ಜಾತಿ
ಜಾತಿಗಳ
ನಡುವೆ
ಹಾಗೂ
ಕೋಮು
ಕೋಮುಗಳ
ನಡುವೆ
ಸಂಘರ್ಷ
ಹುಟ್ಟು
ಹಾಕುತ್ತಿರುವ
ಬಿಜೆಪಿ
ಸರ್ಕಾರ
ತೊಲಗಬೇಕು
ಎಂಬ
ನಿರ್ಣಯ
ಕೈಗೊಳ್ಳಲಾಗುವುದು
ಎಂದರು.ಉಳಿದಂತೆ..
*
ಅಧಿಕಾರ,
ಶಿಕ್ಷಣ
ಮತ್ತು
ಉದ್ಯೋಗದಲ್ಲಿ
ತಕ್ಕ
ಪಾಲುದಾರಿಕೆಗಾಗಿ
*
ಕೋಮುವಾದ
ನಿರ್ನಾಮಕ್ಕಾಗಿ
*
ಕಾನೂನಿನ
ರಕ್ಷಣೆ
ಮತ್ತು
ನ್ಯಾಯಕ್ಕಾಗಿ
*
ಜಾತ್ಯಾತೀತತೆಯ
ಉಳಿವಿಗಾಗಿ
*
ವಕ್ಫ್
ಆಸ್ತಿಗಳ
ಸಂರಕ್ಷಣೆ
ಮತ್ತು
ಅದರ
ಸದುಪಯೋಗಕ್ಕಾಗಿ
ಮುಸ್ಲಿಂ
ಸಮಾವೇಶ
ಅನಿವಾರ್ಯವಾಗಿದೆ
ಎಂದು
ಸಮಾವೇಶ
ಕುರಿತ
ಜಾಹೀರಾರು
ಪ್ರಕಟಣೆಯಲ್ಲಿ
ಹೇಳಲಾಗಿದೆ.
ಈ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಪಾಲ್ಗೊಳ್ಳಲಿದ್ದಾರೆ. ಬಹುದಿನಗಳ ನಂತರ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ದೇವೇಗೌಡರು ಮನಸ್ಸು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಈ ಸಮಾವೇಶದ ನಂತರ ಹುಬ್ಬಳ್ಳಿಯಲ್ಲಿ ಮಹಿಳಾ ಸಮಾವೇಶ, ತುಮಕೂರಿನಲ್ಲಿ ಪರಿಶಿಷ್ಟ ಜಾತಿ ವರ್ಗ ಸಮಾವೇಶ, ಮಂಗಳೂರು ಹಾಗೂ ಗುಲ್ಬರ್ಗಾದಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ಬರ ಇರುವಾಗ ಬಿಜೆಪಿ ಶಾಸಕರು ಸಚಿವ ಗಿರಿಗಾಗಿ ಕಿತ್ತಾಡುತ್ತಿರುವುದನ್ನು ನೋಡಿದರೆ ಬಿಜೆಪಿ ಸರ್ಕಾರ ಕರ್ನಾಟಕವನ್ನು ಬಿಹಾರ ಮಾಡಲು ಹೊರಟಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಪಾದಯಾತ್ರೆ: ಮೈಸೂರು ಜೆಡಿಎಸ್ ಘಟಕ ಮೈಸೂರಿನಿಂದ ಬೆಂಗಳೂರಿನ ತನಕ ಪಾದಯಾತ್ರೆ ಹಮ್ಮಿಕೊಂಡಿದೆ. ಅರಮನೆ ಮೈದಾನದಲ್ಲಿ ನಡೆಯುವ ಮುಸ್ಲಿಂ ಸಮಾವೇಶದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಸನ್ಮಾನಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಅಜೀಜ್ ಉಲ್ಲಾ ಅಜ್ಜು ಹೇಳಿದರು.
ಪಾದಯಾತ್ರೆ ಈದ್ ಮಿಲಾದ್ ಪಾರ್ಕ್ ನಿಂದ ಆರಂಭಗೊಂಡು ಶ್ರೀರಂಗಪಟ್ಟಣ, ಮಂಡ್ಯ, ಚನ್ನಪಟ್ಟಣ, ರಾಮನಗರ, ಬಿಡದಿ, ರಾಜರಾಜೇಶ್ವರಿ ನಗರ ತಲುಪಲಿದೆ ನಂತರ ಅಲ್ಲಿಂದ ಅರಮನೆ ಮೈದಾನಕ್ಕೆ ತೆರಳುವ ವ್ಯವಸ್ಥೆ ಮಾಡಲಾಗಿದೆ ಎಂದು ಅಜ್ಜು ಹೇಳಿದರು.