ಜಗದೀಶ್ ಶೆಟ್ಟರ್ ಮೇಲೆ ಅಕ್ರಮ ಡಿನೋಟಿಫೈ ಆರೋಪ
ಬೆಂಗಳೂರು ಉತ್ತರ ತಾಲೂಕು ದಾಸನಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ವಶಪಡಿಸಿಕೊಂಡಿದ್ದ ಜಮೀನನ್ನು ಅಕ್ರಮ ವಾಗಿ ಡಿನೋಟಿ ಫೈ ಮಾಡಿಸಿಕೊಂಡು ಖಾಸಗಿ ಅವರಿಗೆ ಮಾರಾಟ ಮಾಡಿರುವ ಆರೋಪವನ್ನು ನಿಯೋಜಿತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮೇಲೆ ಹೊರೆಸಲಾಗಿದೆ.
ಸದ್ಯದಲ್ಲೇ ಈ ಸಂಬಂಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗುವುದು ಎಂದಿರುವ ರಂಗೇಗೌಡ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರುತ್ತಿರುವ ಸಂದರ್ಭದಲ್ಲಿ ಆರೋಪಿಸುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಅಥವಾ ಹುನ್ನಾರವಿಲ್ಲ. ನಮಗೆ ಅಗತ್ಯವಾದ ದಾಖಲೆಗಳು ಸಿಕ್ಕಿರಲಿಲ್ಲ. ಹೀಗಾಗಿ ಇಷ್ಟು ದಿನ ಮಾಧ್ಯಮಗಳ ಮುಂದೆ ವಿಷಯ ಮುಂದಿಡಲು ಆಗಿರಲಿಲ್ಲ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗೇಗೌಡ, 2004ರಲ್ಲಿ ಸರ್ಕಾರ ದಾಸನಪುರದಲ್ಲಿ 188 ಎಕರೆ ಜಮೀನನ್ನು ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆಂದು ವಶಪಡಿಸಿಕೊಂಡಿತ್ತು ಎಂದು ಹೇಳಿದರು.
ನಂತರ 2006ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವ ಜಗದೀಶ್ ಶೆಟ್ಟರ್ ದಾಸನಪುರದಲ್ಲಿರುವ 188 ಎಕರೆ ಜಮೀನನ್ನು ಡಿ ನೋಟಿಫೈ ಮಾಡಿದ್ದಾರೆ. ಈಗ ಅಲ್ಲಿ ಖಾಸಗಿ ಅವರು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ.
ಈ ಜಮೀನನ್ನು ಮೂಲ ಮಾಲೀಕರಿಗೆ ಕೊಟ್ಟಿದ್ದರೆ ನಮ್ಮ ಅಭ್ಯಂತರವಿರಲಿಲ್ಲ, ಅದು ಬಿಟ್ಟು ಖಾಸಗಿಯವರಿಗೆ ನೀಡಿರುವುದು ಸರಿಯಿಲ್ಲ. ಇಲ್ಲಿ ಅವ್ಯವಹಾರ ನಡೆದಿದೆ ಎಂದು ತಲಕಾಡು ಚಿಕ್ಕರಂಗೇಗೌಡ ಅವರು ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಮೇಲೆ ಲೋಕಾಯುಕ್ತ ಸಂಸ್ಥೆ ದೂರು ನೀಡಿ, ತನಿಖೆಗೆ ಆದೇಶಿಸುವ ಹೊತ್ತಿಗೆ ಸಿಎಂ ಕುರ್ಚಿಯಲ್ಲಿ ಕೂತಿರುತ್ತಾರೆಯೇ? ಗೊತ್ತಿಲ್ಲ. ಅಲ್ಲದೆ, ಇದು ಸಣ್ಣ ಪ್ರಮಾಣದ ಹಗರಣ ಎನ್ನಬಹುದು. ಬಿಜೆಪಿ ಸರ್ಕಾರದ ಮುಖಂಡರ ಅಕ್ರಮಗಳ ಅಸಮಗ್ರ ಪಟ್ಟಿಯತ್ತ ಕಣ್ಣು ಹಾಯಿಸಿ. ಇದರಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ಲೋಕೋಪಯೋಗಿ ಕಾಮಗಾರಿಗಳ ಮೂಲಕ ಜಗದೀಶ್ ಶೆಟ್ಟರ್ ಅವರು ಗಳಿಸಿದ ಲಾಭ ಗಳಿಯ ಮೊತ್ತವೂ ಸೇರಿದೆ. ಇದೆಲ್ಲವೂ ಅಂದಾಜು ಮೊತ್ತವಾದರೂ ಹಗರಣಗಳಲ್ಲಿ ಈ ಮಹಾನ್ ನಾಯಕರು ಭಾಗಿಯಾಗಿರುವುದಂತೂ ನಿಜ.
*
ಯಡಿಯೂರಪ್ಪ
:
3000
ಕೋಟಿ
ರು
ಅಕ್ರಮ
ಗಣಿಗಾರಿಕೆ
ಮತ್ತು
ಡಿ
ನೋಟಿಫಿಕೇಷನ್
ಪ್ರಕರಣ
*
ಎಂಪಿ
ರೇಣುಕಾಚಾರ್ಯ:
1800
ಕೋಟಿ
ರು
ಅಬಕಾರಿ
ಇಲಾಖೆ
ಭ್ರಷ್ಟಾಚಾರ
*
ಕರುಣಾಕರ
ರೆಡ್ಡಿ:
2000
ಕೋಟಿ
ಗಣಿ
ಹಗರಣ
*
ಸಿಎಂ
ಉದಾಸಿ:
300
ಕೋಟಿ
ಲೋಕೋಪಯೋಗಿ
ಇಲಾಖೆ
ಹಗರಣ
*
ಜಗದೀಶ್
ಶೆಟ್ಟರ್
:
350
ಕೋಟಿ
ಗ್ರಾಮೀಣಾಭಿವೃದ್ಧಿ
ಮತ್ತು
ನೀರು
ಸರಬರಾಜು
*
ಶೋಭಾ
ಕರಂದ್ಲಾಜೆ:
400
ಕೋಟಿ
ರು
ಕೊಡಗಿನ
ಕಾಫಿ
ಎಸ್ಟೇಟ್
ಹಗರಣ
*
ಮುರುಗೇಶ್
ನಿರಾಣಿ
:
1200
ಕೋಟಿ
ರು
ಸಕ್ಕರೆ
ಕಾರ್ಖಾನೆ
ಲೈಸನ್ಸ್
ಹಾಗೂ
ಕೈಗಾರಿಕಾ
ಭೂ
ಹಗರಣ
*
ವಿ
ಸೋಮಣ್ಣ:
900
ಕೋಟಿ
ರು
ವಸತಿ,
ಬಿಡಿಎ
ನಿವೇಶನ
ಹಾಗೂ
ಕಬ್ಬಿಣ
ಅದಿರು
ಹಗರಣ
*
ಬಸವರಾಜ್
ಬೊಮ್ಮಾಯಿ:
600
ಕೋಟಿ
ಭದ್ರಾ
ಮೇಲ್ಡಂಡೆ
ಯೋಜನೆ,
ಲೋಕೋಪಯೋಗಿ
ಇಲಾಖೆ