ನಿತ್ಯಾನಂದ ಎಳೇ ಮಗು ಸ್ವಾಮಿ; ಧಾರ್ಮಿಕ ಉಗ್ರನಲ್ಲ
ಯಾವ angleನಿಂದ ನಿತ್ಯಾನಂದ ಮಹಾಪ್ರಭುಗಳು ಎಳೆಯ ಮಗುವಿನ ಹಾಗೆ ಕಂಡುಬಂದಿದ್ದಾರೋ ಸಾಕ್ಷಾತ್ ಕಾಮಿಸ್ವಾಮಿಯೇ ಹೇಳಬೇಕು. ಆದರೆ ಹಾಗೆ ಹೇಳಿರುವುದು ಮುಗ್ಧ, ಅಮಾಯಕ ಪ್ರಜೆಗಳಲ್ಲ. ಬದಲಿಗೆ ನಾಡಿನ ಪ್ರಜ್ಞಾವಂತ ಮಂದಿ ಹೀಗೆಂದಿದ್ದಾರೆ.
'ನಮ್ ನಿತ್ಯಾನಂದ ಸ್ವಾಮಿಗಳು baby ಹಾಗೆ. ಅವರನ್ನು ಹಾಗೇ ಬಿಟ್ಟುಬಿಡಿ, please' ಎಂದು ಯುವ ಶಿಷ್ಯೋತ್ತಮಳು ಹೇಳಿದ್ದಾಳೆ. ಈಕೆಯ ಪಾಂಡಿತ್ಯ ವಸಿ ನೋಡಿ. ಈಕೆ MIT ಎಂಬ ವಿಶ್ವಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.
ಅದೂ ಯಾವ ವಿಷಯದಲ್ಲಿ ಅಂದ್ರಾ? ಐಟಿ-ಬಿಟಿ ಇತಿಹಾಸಕ್ಕೆ ಸೇರಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ನ್ಯಾನೊ ಟೆಕ್ನಾಲಜಿ ಎಂಬ ಭವಿಷ್ಯದ ಟೆಕ್ನಾಲಜಿ ವಿಷಯದಲ್ಲಿ ಈಕೆ ವಿಜ್ಞಾನಿ. ಇರಲಿ ಆಕೆ ಏನೇ ಹೇಳಿರಲಿ. ಕನಿಷ್ಠ ಆಕೆಯ ಈ ಓದಿಗಾದರೂ ಮರ್ಯಾದೆ ಕೊಡೋಣ ಬಿಡಿ.
ಬಹಳಷ್ಟು ಮಂದಿಗೆ ಸ್ಪೆಲ್ಲಿಂಗು/ಉಚ್ಛಾರಣೆಯೂ ಕಷ್ಟವೆನಿಸುವ Massachusetts Institute of Technology ಎಂಬ ಅಮೆರಿಕದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಈ ಮಹಾಸಾಧ್ವಿಯು 'ನನ್ನ ಸ್ವಾಮಿಯನ್ನು ಬುಟ್ಟುಬಿಡಿ' ಎಂದು ಮೊನ್ನೆ ಮೈಸೂರು ಜೈಲು ಬಳಿ ಅಬ್ಬೇಪಾರಿಯಾಗಿ ಸಿಕ್ಕಿಸಿಕ್ಕವರ ಬಳಿಯೆಲ್ಲಾ ಅಂಗಾಲಾಚುತ್ತಿದ್ದಳು.
ಇದ್ಯಾವುದೋ ಕೇಸಿರಬೇಕು ಎಂದು ಕೊಂಡು ಸುಮ್ಮನಾಗೋಣ ಅಂದುಕೊಂಡರೆ ಅಯಮ್ಮನಿಗೇ ಆನ್ಕೊಂಡು ಮತ್ತೊಬ್ಬ ಯುವತಿ ನಿಂತಿದ್ದರು. ಆಯಮ್ಮಾ ಅಶ್ವಿನಿ ದೇವತೆ! ಅರ್ಥಾತ್ ವೈದ್ಯೆ. ಅಯಮ್ಮನದೂ ಅದೇ ವರಾತ 'ನನ್ನ ದೇವ್ರನ್ನು ಬಿಟ್ಟುಬಿಡಿ' ಅಂತ.
ಹಾಗೆ
ಮೈಸೂರು
ಜೈಲಿನ
ಮುಂದೆ
ಠಳಾಯಿಸುತ್ತಿದ್ದ
ಶಿಷ್ಯೋತ್ತಮರು
ಇನ್ನೂ
ಅನೇಕಾನೇಕ.
ಟೆಕ್ಕಿಗಳು,
ಚಾರ್ಟರ್ಡ್
ಅಕೌಂಟೆಂಟುಗಳು,
ಕಾರ್ಪೊರೇಟ್
ಕಂಪನಿಗಳ
ದೊಡ್ಡ
ಕುಳಗಳು,
ವೈದ್ಯರು,
ವಿಜ್ಞಾನಿಗಳು,
ಇಂಜಿನಿಯರುಗಳು.
ನಾಡಿನ
education
fraternityಯೇ
ಅಲ್ಲಿ
ಉದ್ಭವಿಸಿತ್ತು
ಎಂದು
ಖುದ್ದು
IGP
ಭಾಸ್ಕರ
ರಾವ್
ಅವರೇ
ಗುಟ್ಟಾಗಿ
ಹೇಳಿದ್ದಾರೆ.
ಇದೆಲ್ಲದರ
ಹೊರತಾಗಿ
'ಅಮ್ಮಾ
ಅಚಲಾ,
ಅಮ್ಮಾ
ರಂಗನಾಯಕಿಗಳು
ಇನ್ನೆಷ್ಟೋ...!'