ಸಂಪಂಗಿ ಲಂಚ: ಹೈಕೋರ್ಟಿನಲ್ಲಿ ಮರಣೋತ್ತರ ಪರೀಕ್ಷೆ
ಅದನ್ನೆಲ್ಲಾ ಪಕ್ಕಕ್ಕಿಟ್ಟು ಕೋರ್ಟುಗಳಲ್ಲಿನ ಕೆಲವು ಮೂಲವ್ಯಾದಿ ವಿಷಯಗಳನ್ನು ಕೆದಕೋಣ. ಅದಕ್ಕೂ ಮುನ್ನ ಒಂದು ವಿಷಯ ಸ್ಪಷ್ಟವಾಗಲಿ. ರೆಡ್ಡಿಯಿಂದ ಲಂಚ ತಿಂದು ಜಾಮೀನು ನೀಡಿದ್ದ ಜಡ್ಜ್ ಪಟ್ಟಾಭಿಯನ್ನು ಮನೆಗೆ ಕಳಿಸಲು ಹಿಂದೆಮುಂದೆ ನೋಡದ ಖಡಕ್ ಜಡ್ಜುಗಳು ಇನ್ನೂ ಇದ್ದಾರೆ. And ಅವರು ನಮ್ಮ ಕರ್ನಾಟಕದವರು ಎಂಬ ಹೆಮ್ಮೆ ನಮಗಿರಲಿ. ಆದರೆ ಇದೇ ಕರ್ನಾಟಕದ ಹೈಕೋರ್ಟು ಅಂಗಳಿಂದ ನಿನ್ನೆ ಹೊರಬಿದ್ದಿರುವ ತೀರ್ಪನ್ನು ನೋಡಿ... ಅಮಾಯಕ ಪ್ರಜೆ ಅಸಹಾಯಕತೆಯಿಂದ ಮೈಪರಿಚಿಕೊಳ್ಳುತ್ತಿದ್ದಾನೆ, ಅಷ್ಟೆ.
ವ್ಯವಸ್ಥೆ ಎಲ್ಲಿಗೆ ಬಂತು ನೋಡಿ ಎಂದು ಹಪಹಪಿಸಬೇಕೋ ಅಥವಾ ಹೊರಬಿದ್ದರುವ ತೀರ್ಪಿನ ಬಗ್ಗೆ ವಿಮರ್ಶೆ ಮಾಡುವ ಧಾರ್ಷ್ಯ ತೋರಬೇಕೋ ತಿಳಿಯದೆ ವಿಲವಿಲ ಅನ್ನುತ್ತಿದ್ದಾನೆ. ಈ ಸಂದರ್ಭದಲ್ಲಿ ಜೈಲುಶಿಕ್ಷೆಗೆ ಗುರಿಯಾಗಿಯೂ ಸ್ವತಂತ್ರಗೊಂಡ (ಇಂದು ಸಂಜೆಯ ವೇಳೆಗೆ) ಜನಪ್ರತಿನಿಧಿಯ ಅದೃಷ್ಟದ ಬಗ್ಗೆ ಮಾತನಾಡದೆ ಸ್ವಲ್ಪ ಹಿಂದಕ್ಕೆ ಹೋಗಿ ಮೂಲವ್ರಣವನ್ನು ಕೆದಕಿದಾಗ...
ಅಲ್ಲಾ ಸ್ವಾಮಿ, ಮಾಜಿ ಲೋಕಾಯುಕ್ತರೇ ಮತ್ತು ಲೋಕಾಯುಕ್ತ ಕೋರ್ಟಿನ ಹಾಲಿ ಜಡ್ಜ್ ಸಾಹೇಬರೇ ನಿಮಗೆ ಒಂಚೂರು ಕಾನೂನು ಜ್ಞಾನವಿಲ್ಲವಾ? ಅಮಾಯಕ ಜನರನ್ನು ಈ ಪಾಟಿ ಯಾಮಾರಿಸುವುದಾ ನೀವು? ಒಬ್ಬ ಜನಪ್ರತಿನಿಧಿಯನ್ನು ಜೈಲಿಗಟ್ಟುವ ಮೂಲಕ ಹೇಗೆ ನೀವು ನಾಡಿನ ಜನರನ್ನು ಯಾಮಾರಿಸಿದ್ದೀರಿ, ನೋಡಿ?
ನೀವುಗಳು ನೀಡಿದ ತೀರ್ಪನ್ನು ಕೇಳಿ ಹಾಲು ಕುಡಿದಷ್ಟು ಸಂತೋಷಪಟ್ಟಿವಿ. ಆದರೆ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬುದನ್ನು ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಕೇವಲ, ಯಸ್ ಕೇವಲ ಮೂರೇ ದಿನದಲ್ಲಿ ನಿಮ್ಮ ತೀರ್ಪಿನ ಹಕೀಕತ್ತು ಏನು ಎಂಬುದನ್ನು ನಮ್ಮ ಘನ ಹೈಕೋರ್ಟ್ ತಿಳಿಸಿಕೊಟ್ಟಿದೆ.
ಅಸಲಿಗೆ ಅದು (ಜನಪ್ರತಿನಿಧಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ) fit case ಅಲ್ವೇ ಅಲ್ಲ. ಸುಮ್ನೆ ಪಾಪ ನಮ್ಮ ಘನಂಧಾರಿ ಜನನಾಯಕನನ್ನು caseನಲ್ಲಿ fit ಮಾಡಿದ್ದಾರೆ ಅಷ್ಟೆ ಎಂದು high court order order ಎಂದಿದೆ.
ಅಲ್ಲ ಸ್ವಾಮಿ ಕೇಸಿನ ಸಾಧಕ-ಬಾಧಕಗಳು, ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತನಾಡುವ ಮುನ್ನವೇ, ಮೂಲದಲ್ಲೆ ಅದನ್ನು ಚಿವುಟಿಹಾಕಿದೆಯಲ್ಲಾ ಮೇಲಿನ ಕೋರ್ಟು? ಈಗೇನು ಮಾಡ್ತೀರಿ. ನಾವು ನಿಮ್ಮ ಬಗ್ಗೆ ಎಷ್ಟೊಂದು ಆಶಾಭಾವ ಹೊಂದಿದ್ದಿವಿ. ಜನಪ್ರತಿನಿಧಿಗಳು ನಮ್ಮ ಕೈಬಿಟ್ಟು, ತಿನ್ನಬಾರದ್ದನೆಲ್ಲಾ ತಿನ್ನುತ್ತಿರುವಾಗ 'ಒಬ್ಬ ಮಾಜಿ ಲೋಕಾಯುಕ್ತ, ಒಬ್ಬ ಲೋಕಾಯುಕ್ತ ಕೋರ್ಟಿನ ಜಡ್ಜ್ ಸಾಹೇಬ ನಮ್ಮ ಕೈಹಿಡಿದಿದ್ದಾರಲ್ಲಾ, ಅಷ್ಟು ಸಾಕು. ನಮಗೂ ಭವಿಷ್ಯವಿದೆ' ಎಂದು ಅಮಾಯಕ ಪ್ರಜೆ ಐಶ್ವರ್ಯ ರೈನಂತೆ ಉಬ್ಬಿಹೋಗಿದ್ದ. ಆದರೆ ಹೈಕೋರ್ಟ್ ಸರಿಯಾಗಿಯೇ pin ಮಾಡಿದೆ ಬಿಡಿ.
ಇನ್ನು ಮೇಲೆ ನೀವು ನೀಡುವ ಯಾವುದೇ ತೀರ್ಪಿನ ಬಗ್ಗೆ ನಾವು ತಕ್ಷಣಕ್ಕೆ ವಿಶ್ವಾಸ ಹೊಂದುವುದಿಲ್ಲ ಬಿಡಿ. unles