ಭಾನುವಾರ ಬೆಂಗ್ಳೂರಲ್ಲಿ ಗೌಡರ ಶಕ್ತಿಪ್ರದರ್ಶನ
ಸಮಾವೇಶದಲ್ಲಿ ಆದಿಚುಂಚನಗಿರಿ ಮಾಹಾಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಗುವುದು. ಈ ಸಮಾವೇಶದಲ್ಲಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ:
1.
ರಾಷ್ಟ್ರಕವಿ
ಕುವೆಂಪು
ಅವರಿಗೆ
ಭಾರತರತ್ನ
ನೀಡಬೇಕು.
2.
ಕುವೆಂಪು
ಮತ್ತು
ಬೆಂಗಳೂರು
ನಿರ್ಮಾತೃ
ಕೆಂಪೇಗೌಡರ
ಭಾವಚಿತ್ರವುಳ್ಳ
ಅಂಚೆಚೀಟಿ
ಬಿಡುಗಡೆ
ಮಾಡಬೇಕು.
3.
ಮೈಸೂರು
ದಸರಾ
ಮಾದರಿಯಲ್ಲಿ
ಕೆಂಪೇಗೌಡ
ಜಯಂತಿ
ಆಚರಿಸಬೇಕು.
4.
ಟಂಕಶಾಲೆ
ಆರಂಭಿಸಿದ
ಕೆಂಪೇಗೌಡರ
ಸವಿನೆನಪಿಗಾಗಿ
ಅವರ
ಭಾವಚಿತ್ರವುಳ್ಳ
ನಾಣ್ಯ
ಬಿಡುಗಡೆ
ಮಾಡಬೇಕು
5.
ತುಮಕೂರು,
ರಾಮನಗರ,
ಚಿಕ್ಕಬಳ್ಳಾಪುರ,
ಕೋಲಾರ
ಮತ್ತು
ಬೆಂಗಳೂರಿಗೆ
ಶಾಶ್ವತ
ಕುಡಿಯುವ
ನೀರಿನ
ಯೋಜನೆ
ಜಾರಿಗೊಳಿಸಬೇಕು.
6.
ಬೆಂಗಳೂರು
ದೇವನಹಳ್ಳಿ
ಅಂತರಾಷ್ಟ್ರೀಯ
ವಿಮಾನ
ನಿಲ್ದಾಣಕ್ಕೆ
ಕೆಂಪೇಗೌಡರ
ಹೆಸರಿಡಲು
ಕೇಂದ್ರ
ಕಾರ್ಯಪ್ರವುತ್ತರಾಗಲು
ಒತ್ತಾಯಿಸುವುದು.
ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ಒಕ್ಕಲಿಗ ಬಾಂಧವರಿಗೆ ಬಸ್ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ.
ನಾಳೆ ನಡೆಯಲಿರುವ ಈ ಸಮಾವೇಶದಲ್ಲಿ ಯಾವ ಯಾವ ನಾಯಕರು ಭಾಗವಹಿಸಲಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಕೆಲ ದಿನಗಳ ಹಿಂದೆ ಕುಂಚಿಟಿಗ ಒಕ್ಕಲಿಗ ಸಮಾವೇಶದಲ್ಲಿ ಸ್ವಾಮೀಜಿಗಳ ನಡುವಣ ಮಾತಿನ ಸಂಘರ್ಷದ ಹಿನ್ನಲೆಯಲ್ಲಿ ನಾಳಿನ ಕಾರ್ಯಕ್ರಮದಲ್ಲಿ ಯಾರು ಭಾಗವಹಿಸುತ್ತಾರೆ ಎನ್ನುವುದರ ಬಗ್ಗೆ ಸಮುದಾಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಸಮಾವೇಶಕ್ಕೆ ಗೈರುಹಾಜರು ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೆ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಅನುಮಾನವಿದೆ.
ಸಿಎಂ ಸದಾನಂದ ಗೌಡ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ವಿಮಲಾಗೌಡ, ಡಿ ಕೆ ಶಿವಕುಮಾರ್ ಮುಂತಾದವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.