ಆಂಟಿ ಮೇಲೆ ಪ್ರೇಮ, ಅಂಕಲ್ ಕೊಂದ ಪ್ರಕಾಶ
ಸ್ಥಳೀಯ ಕಂಟ್ರ್ಯಾಕ್ಟರ್ ಚಿನ್ನಸ್ವಾಮಿರೆಡ್ಡಿ (ಎಂಬ 52 ವರ್ಷದ ಮರ್ಯಾದಸ್ಥನನ್ನು ಪ್ರಕಾಶ ಎಂಬಾತ ಕೊಲೆ ಮಾಡಿದ್ದಾನೆ.
ಚಿನ್ನಸ್ವಾಮಿ ರೆಡ್ಡಿ ಕೆಂಪ ದೊಮ್ಮಸಂದ್ರ ಗ್ರಾಮದಿಂದ ಆನೇಕಲ್ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾದು ಕೂತ್ತಿದ್ದ ಆರೋಪಿ ಪ್ರಕಾಶ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆ ನಡೆದ ವೇಳೆ ಮಂಜುಳಾ ಕೂಡಾ ಜೊತೆಗಿದ್ದಳು ಎನ್ನಲಾಗಿದೆ. ಇಬ್ಬರು ಆರೋಪಿಗಳು ಸದ್ಯಕ್ಕೆ ನಾಪತ್ತೆಯಾಗಿದ್ದಾರೆ.
ಮಂಜುಳಾಗೆ ಸುಮಾರು ಐದಾರು ವರ್ಷಗಳಿಂದ ತನ್ನ ಊರಿನ ಪ್ರಕಾಶ್ನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡ ಶಂಕೆ ವ್ಯಕ್ತವಾಗಿದೆ. ಇದನ್ನು ತಿಳಿದ ಚಿನ್ನಸ್ವಾಮಿ ರೆಡ್ಡಿ ತನ್ನ ಕುಟುಂಬದ ಮರ್ಯಾದೆಯನ್ನು ಕಾಪಾಡುವ ದೃಷ್ಟಿಯಿಂದ ತನ್ನ ಸಂಸಾರವನ್ನು ದೊಮ್ಮಸಂದ್ರದಿಂದ ಅತ್ತಿಬೆಲೆಗೆ ಸ್ಥಳಾಂತರಿಸಿದ್ದ.
ಆದರೆ ಎರಡು ದಿನಗಳ ಹಿಂದೆ ಊರಿಗೆ ಬಂದಿದ್ದ ಮಂಜುಳಾಳನ್ನು ಚಿನ್ನಸ್ವಾಮಿ ಕರೆದುಕೊಂಡು ಹೋಗಲು ಬಂದಿದ್ದ. ಆದರೆ, ಮಾರ್ಗಮಧ್ಯೆ ಅಡ್ಡಗಟ್ಟಿದ ಪ್ರಕಾಶ, ಚಿನ್ನಸ್ವಾಮಿ ಮೇಲೆ ಹಲ್ಲೆ ನಡೆಸಿ ಕೊಲೆಗೈದು ಮಂಜುಳಾಳೊಂದಿಗೆ ಪರಾರಿಯಾಗಿದ್ದಾನೆ.
ಆನೇಕಲ್ ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅನೈತಿಕ ಸಂಬಂಧ, ವೈಯಕ್ತಿಕ ದ್ವೇಷ ಇರಬಹುದ ಎಂದು ಶಂಕಿಸಲಾಗಿದೆ. ಆರೋಪಿಗಳ ಹುಡುಕಾಟ ನಡೆದಿದೆ ಎಂದು ಠಾಣಾಧಿಕಾರಿ ಹೇಳಿದ್ದಾರೆ.