ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಮಲ ದೇವಸ್ಥಾನದಲ್ಲಿ ಕಾಲ್ತುಳಿತ : 10 ಭಕ್ತರಿಗೆ ಗಾಯ

By Prasad
|
Google Oneindia Kannada News

Stampede in Tirumala temple : 10 devotees injured
ತಿರುಮಲ, ಮೇ. 26 : 'ಸಹಸ್ರ ಕಳಶಾಭಿಷೇಕ' ವಿಶೇಷ ಪೂಜೆ ಏರ್ಪಡಿಸಿದ್ದ ಸಂದರ್ಭದಲ್ಲಿ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಮಧ್ಯಾಹ್ನ ನೂಕುನುಗ್ಗಲಿನಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ 10ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಬೇಸಿಗೆ ರಜೆಯಾದ್ದರಿಂದ ವಾರಾಂತ್ಯದಲ್ಲಿ ತಿರುಮಲದಲ್ಲಿ 1 ಲಕ್ಷಕ್ಕೂ ಹೆಚ್ಚು ಜಮಾಯಿಸಿದ್ದರು. ಆದರೆ, ತಿರುಪತಿ ತಿರುಮಲ ದೇವಸ್ಥಾನಂನ ಅಜಾಗರೂಕತೆಯಿಂದಾಗಿ ನೂಕುನುಗ್ಗಲು ಸಂಭವಿಸಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾರದ ಎಲ್ಲಾ ದಿನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರಾದರೂ ಇಂದು ಶನಿವಾರವಾದ್ದರಿಂದ ದಾಖಲೆ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಸಾಮಾನ್ಯ ದರ್ಶನಕ್ಕೆ ಭಕ್ತರಿಗೆ 24 ಗಂಟೆ ತಗಲುತ್ತಿದ್ದು, ವಿಶೇಷ ದರ್ಶನಕ್ಕೆ ನಿಂತವರಿಗೆ ಸುಮಾರು 7 ಗಂಟೆ ತಲಗುತ್ತಿದೆ. ಭಕ್ತರಿಗೆ ವಾಸಕ್ಕೆ ಜಾಗವೂ ಸಿಗುತ್ತಿಲ್ಲ.

ವಿಶೇಷ ಪೂಜೆ ಏರ್ಪಡಿಸಿದ ಸಂದರ್ಭದಲ್ಲಿ ಟಿಟಿಡಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಮತ್ತು ನೂಕುನುಗ್ಗಲಾಗದಂತೆ ಪೊಲೀಸರಿಂದ ರಕ್ಷಣೆ ನೀಡಬೇಕು ಎಂಬುದು ಭಕ್ತರು ಹೇಳುತ್ತಿದ್ದಾರೆ. ಒಂದು ವರ್ಷಕ್ಕಿಂತ ಕಡಿಮೆ ಮಕ್ಕಳ ಪಾಲಕರಿಗೆ ಮತ್ತು ವಯಸ್ಸಾದವರಿಗೆ ವಿಶೇಷ ವ್ಯವಸ್ಥೆ ಇರುತ್ತದಾರದೂ ಗರ್ಭಗುಡಿ ಪ್ರವೇಶಿಸುವಾಗ ಎಲ್ಲ ಭಕ್ತಾದಿಗಳು ಇಕ್ಕಟ್ಟಾದ ಸ್ಥಳದಲ್ಲಿ ಬಂದು ಸೇರುತ್ತಾರೆ. ಅವಘಡಗಳಾಗುವುದು ಈ ಜಾಗದಲ್ಲಿಯೇ.

English summary
10 devotees have been injured, 3 grievously, when stampede happened at Tirupati Tirumala temple on Saturday, May 26, 2012. More than 1 lakh people have gather at the temple to witness Sahasra Kalashabhishekam. Devotees say the stampede happened due to negligence of the management of TTD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X