ಜಗನ್ ಚಿಕ್ಕಪ್ಪ ವೈಎಸ್ ವಿವೇಕ ಕಾಂಗ್ರೆಸ್ ಗೆ ಗುಡ್ ಬೈ
ಜಗನ್ ಬಂಧನದಿಂದ ಉಂಟಾಗಬಹುದಾದ ಗಲಭೆ, ರಾಜಕೀಯ ವಿಪ್ಲವ ಹತ್ತಿಕ್ಕಲು ಆಂಧ್ರ ಪೊಲೀಸರು ಈಗಾಗಲೇ ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ.
ಪುಲಿವೆಂದುಲದಲ್ಲಿ ತಮ್ಮ ಬೆಂಬಲಿಗರ ಜೊತೆ ಮಾತುಕತೆ ನಡೆಸಿದ ನಂತರ ಮಾಜಿ ಸಚಿವ ಹಾಗೂ ಸಂಸದ ವಿವೇಕಾನಂದ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ನನ್ನ ಅಣ್ಣ ವೈಎಸ್ ಆರ್ ಅವರ ಹೆಸರು ಬಳಸಿಕೊಂಡು ಕಾಂಗ್ರೆಸ್ ಅಧಿಕಾರ ಬಂದಿದೆ. ಆದರೆ, ಇತ್ತೀಚೆಗೆ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿಕೊಂಡು ಅಪಮಾನ ಮಾಡಲಾಗುತ್ತದೆ. ಅನಗತ್ಯವಾಗಿ ತನಿಖೆ, ಆರೋಪಗಳು ಕೇಳಿ ಬರುತ್ತಿರುವುದು ಬೇಸರ ತರಿಸಿದೆ ಎಂದು ವಿವೇಕಾನಂದ ಹೇಳಿದ್ದಾರೆ.
ವೈಎಸ್ ರಾಜಶೇಖರ್ ರೆಡ್ಡಿ ಅವರ ಆಶಯದಂತೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡರೂ ವಿವೇಕಾನಂದ ಅವರು ಕಾಂಗ್ರೆಸ್ ತೊರೆದಿರಲಿಲ್ಲ. ಪಕ್ಷ ನಿಷ್ಠೆ ಮೆರೆದಿದ್ದ ವಿವೇಕಾನಂದ ಅವರಿಗೆ ಈಗ ತಮ್ಮ ಕುಟುಂಬವನ್ನು ಸ್ವತಃ ಕಾಂಗ್ರೆಸ್ಸಿಗರು ಟಾರ್ಗೆಟ್ ಮಾಡುತ್ತಿರುವುದು ಸಹಿಸಲು ಸಾಧ್ಯವಾಗದೆ ಪಕ್ಷದಿಂದ ಹೊರ ಬಂದಿದ್ದಾರೆ.
ಆದರೆ, ಮುಂದಿನ ನಡೆ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ವೈಎಸ್ ಆರ್ ಪಕ್ಷ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ರಾಜಶೇಖರ ರೆಡ್ಡಿಯಷ್ಟು ಡೈನಾಮಿಕ್ ಪರ್ಸನಾಲಿಟಿ ಇಲ್ಲದಿದ್ದರೂ ಜನತೆಯಲ್ಲಿ ವಿವೇಕಾನಂದ ಅವರ ಮೇಲೆ ಸಾಫ್ಟ್ ಕಾರ್ನರ್ ಇದ್ದೇ ಇದೆ.