ಯಡಿಯೂರಪ್ಪ ಅವರಿಗೆ ಶಿಕ್ಷೆಯಾದರೆ ಬಿಕ್ಕಟ್ಟು ಶಮನ
ಭಾರತೀಯ ಜನತಾ ಪಕ್ಷಕ್ಕೆ ಯಡಿ ಯೂರಪ್ಪ ರವರ ಅಗತ್ಯವಿದೆ. ಅವರು ಪಕ್ಷದ ಹಿರಿಯ ನಾಯಕರು ಎಂಬುದನ್ನು ಮರೆಯುವಂತಿಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಗ್ಗೆ ಸಿಬಿಐ ತನಿಖೆಗೆ ಆದೇಶ ಆಗಿದೆ. ಈ ತನಿಖೆಯಿಂದ ಯಡಿಯೂರಪ್ಪನವರಿಗೆ ನಿಜಕ್ಕೂ ನ್ಯಾಯ ದೊರಕುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ತಪ್ಪು ಎಸೆಗಿದ್ದರೆ ಶಿಕ್ಷೆಯಾಗಲಿದೆ ಎಂದು ಶಾಸಕ ಆನಂದ್ ಹೇಳಿದರು.
ಸದಾನಂದ ಗೌಡರನ್ನು ಹೊರತುಪಡಿಸಿ ಮೂರನೆಯವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲು ತಂತ್ರ ನಡೆಸಿರುವ ಸುದ್ದಿ ಇದೆ. ಆದರೆ, ನಮ್ಮ ಬೆಂಬಲ ಎಂದಿದ್ದರೂ ಸದಾನಂದ ಗೌಡರಿಗೆ ಮಾತ್ರ. ಮುಂದಿನ ಒಂದು ವರ್ಷ ಸದಾನಂದ ಗೌಡರೇ ಮುಖ್ಯಮಂತ್ರಿಯಾಗಿ ಮುಂದುವರಿದು, ಉತ್ತಮ ಆಡಳಿತ ನೀಡುವಂತಾಗಬೇಕು ಎಂದು ಆನಂದ ಅಸ್ನೋಟಿಕರ್ ಎಂದು ಹೇಳಿದ್ದಾರೆ.
ಬಾಲಚಂದ್ರ
ಜಾರಕಿಹೊಳಿ
ಅವರು
ಈಗಾಗಲೇ
ಬಿಜೆಪಿ
ಹೈಕಮಾಂಡ್
ಜೊತೆ
ಸಂಪುಟ
ವಿಸ್ತರಣೆ
ಬಗ್ಗೆ
ಮಾತುಕತೆ
ನಡೆಸಿದ್ದಾರೆ.
ನಾವೇನು
ಸನ್ಯಾಸಿಗಳಲ್ಲ.
ರೆಸಾರ್ಟ್
ರಾಜಕೀಯ
ನಮಗೂ
ಬೇಕಿಲ್ಲ.
ಸುಮ್ಮನಿದ್ದರೆ
ಏನು
ಸಿಗುವುದಿಲ್ಲ
ಎಂಬ
ಕಾರಣಕ್ಕೆ
ಸಂಪುಟ
ವಿಸ್ತರಣೆಗೆ
ಆಗ್ರಹಿಸಿದ್ದೇವೆ
ಎಂದು
ಗೋವಾದ
ಲೀಲಾ
ಹೋಟೆಲ್
ನಲ್ಲಿ
ಬೀಡುಬಿಟ್ಟಿರುವ
ಶಾಸಕ
ಆನಂದ್
ಹೇಳಿದ್ದಾರೆ.