ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೈ-ಕ ವಿಶೇಷ ಸ್ಥಾನಕ್ಕೆ ಚಿದಂಬರಂ ಭರವಸೆ
ತಿದ್ದುಪಡಿ ಮಸೂದೆಯ ಕರಡು ಪ್ರತಿ ಈಗಾಗಲೇ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಚಿವಾಲಯ ತಲುಪಿದೆ. ಪ್ರಧಾನಿ ಅವರು ಅವಲೋಕಿಸಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು. ನಂತರ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಚಿದಂಬರಂ ಅವರು ಭರವಸೆ ನೀಡಿದ್ದಾರೆ ಎಂದು ಸಿಎಂ ಸದಾನಂದ ಗೌಡರು ಸುದ್ದಿಗಾರರಿಗೆ ತಿಳಿಸಿದರು.
ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಗೃಹ ಸಚಿವ ಚಿದಂಬರಂ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ಭಾಗಿಯಾಗಿರಲಿಲ್ಲ. ಬರ ಪರಿಹಾರ ಕಾರ್ಯಗಳಿಗೆ ಕೇಂದ್ರ ದಿಂದ ಹೆಚ್ಚಿನ ನೆರವು ಪಡೆಯಲು ದೆಹಲಿಗೆ ಬಂದಿರುವ ರಾಜ್ಯದ ನಿಯೋಗ ಶುಕ್ರವಾರ(ಮೇ.3)ಬೆಂಗಳೂರಿಗೆ ಮರಳಲಿದೆ.
ಮುಖ್ಯಮಂತ್ರಿ ಸದಾನಂದ ಗೌಡರು ಮಾತ್ರ ದೆಹಲಿಯಲ್ಲೇ ಉಳಿಯಲಿದ್ದು, ಬಿಜೆಪಿ ವರಿಷ್ಠರು, ಇನ್ನೂ ಕೆಲ ಕೇಂದ್ರ ಸಚಿವರನ್ನು ಭೇಟಿ ಮಾಡಿ ನಂತರ ರಾಜ್ಯಕ್ಕೆ ಹಿಂತಿರುಗಲಿದ್ದಾರೆ.
Comments
ಬರ ಹೈದರಾಬಾದ್ ಕರ್ನಾಟಕ ಸಂವಿಧಾನ ಪಿ ಚಿದಂಬರಂ ಯುಪಿಎ ಸದಾನಂದ ಗೌಡ hyderabad karnataka indian constitution p chidambaram sadananda gowda drought
English summary
Home Minister P Chidamabaram assured All party delegation led by CM DV Sadananda Gowda that UPA Government is ready to amend article 371 of Constitution of India which helps development of Hyderabad Karnataka. The Amendment and bill will be passed in the next session.
Story first published: Thursday, May 3, 2012, 19:07 [IST]