ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾಗೆ ನೀರುಕುಡಿಸಿದ ಕೋರ್ಟ್: ಸದ್ಯಕ್ಕೆ ರಾಜ್ಯ ಬಚಾವ್

|
Google Oneindia Kannada News

SC puts TN application on hold, Cauvery dispute
ನವದೆಹಲಿ, ಏ 27: ಬೇಸಿಗೆಯಿಂದ ತತ್ತರಿಸಿರುವ ಕಾವೇರಿ ಭಾಗದ ಜಿಲ್ಲೆಗಳ ಜನರ ಪಾಲಿಗೆ ಸುಪ್ರೀಂಕೋರ್ಟ್ ಇಂದು ಸ್ವಲ್ಪ ನಿರಾಳವಾಗುವ ಆದೇಶ ನೀಡಿದೆ. ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಸಂಬಂಧ ತಮಿಳುನಾಡಿನ ಅರ್ಜಿಯನ್ನು ಸದ್ಯಕ್ಕೆ ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಈಗಲೇ ಈ ಅರ್ಜಿಯ ವಿಚಾರಣೆ ಸಾಧ್ಯವಿಲ್ಲ. ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಮೂರು ಮಂದಿ ಸದಸ್ಯರು ಇರುವ ಹೊಸ ಪೀಠ ರಚಿಸಿ ಜುಲೈ ತಿಂಗಳಲ್ಲಿ ಅರ್ಜಿಯ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಯ ಪೀಠಕ್ಕೆ ಆದೇಶಿಸಿದೆ. ಹಾಗಾಗಿ, ಕರ್ನಾಟಕ ಸರಕಾರ ಈ ತಿಂಗಳ ಜುಲೈ ತಿಂಗಳವರೆಗೆ ತಮಿಳುನಾಡಿಗೆ ನೀರು ಬಿಡುವ ಗೋಜಿಗೆ ಹೋಗಬೇಕಾಗಿಲ್ಲ.

ಬೇಸಿಗೆ ಬೆಳೆ ಬೆಳೆಯದಂತೆ ಕರ್ನಾಟಕಕ್ಕೆ ನಿರ್ಭಂದ ಹೇರ ಬೇಕೆಂದು ತಮಿಳುನಾಡು ರಾಜ್ಯದ ವಿರುದ್ದ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಆದೇಶದಿಂದ ತಮಿಳುನಾಡು ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

ಈ ಮಧ್ಯೆ, ಸರಕಾರ ತಮಿಳುನಾಡಿಗೆ ನೀರು ಹರಿಯ ಬಿಟ್ಟಿಲ್ಲ, ಮಾಧ್ಯಮಗಳಲ್ಲಿ ಬಂದು ವರದಿಯಲ್ಲಿ ನಿಜಾಂಶವಿಲ್ಲ ಎಂದು ಸಿಎಂ ಸದಾನಂದ ಗೌಡ ಸ್ಪಷ್ಟ ಪಡಿಸಿದ್ದಾರೆ.

English summary
Supreme Court of India decides to appoint three judge commiittee to look in to Tamilnadu application to direct Karnataka to release Kaveri river water for summer crop. The proposed committee will take up the application for study in July 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X