'ಅರ್ಥ್ ಅವರ್' ಆಚರಿಸಿ, ಶಕ್ತಿ ಉಳಿಸಿ: ಸಚಿವೆ ಶೋಭಾ
ಭಾರತದಲ್ಲಿ ಈ ಬಾರಿ ಮಾ.31ರಂದು ಶನಿವಾರ ರಾತ್ರಿ 8.30 ನಿಮಿಷಕ್ಕೆ ಅರ್ಥ್ ಅವರ್ ಆರಂಭವಾಗಲಿದ್ದು 9.30 ಗಂಟೆವರೆಗೆ ಆಚರಣೆ ಇರುತ್ತದೆ. ಪರಿಸರ ಸಂರಕ್ಷಣೆಗಾಗಿ ವಿದ್ಯುತ್ ದೀಪಗಳನ್ನು ಸ್ವಿಚ್ ಆಫ್ ಮಾಡಿ ಎಂದು ಸಚಿವೆ ಶೋಭಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವಿಶ್ವದಾದ್ಯಂತ ನಡೆಯುವ ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳುತ್ತಿವೆ. ಸಿಡ್ನಿಯಲ್ಲಿ 2007ರಲ್ಲಿ ಆರಂಭವಾದ ಈ ಚಳವಳಿಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಅರ್ಥ್ ಅವರ್ ಕೇವಲ ಒಂದು ಗಂಟೆ ವಿದ್ಯುತ್ ದೀಪ ಆರಿಸುವ ಕ್ರಿಯೆಯಾಗದೆ, ಜಾಗತಿಕ ತಾಪಮಾನ ಹೆಚ್ಚಳವನ್ನು ತಗ್ಗಿಸಲು ಪ್ರತಿ ದಿನ ಪ್ರಯತ್ನ ಪಡೆಬೇಕಾಗಿದೆ ಎಂದು ಡಬ್ಲ್ಯೂಡಬ್ಲ್ಯೂಎಫ್ ನ ಸಿಇಒ ರವಿ ಸಿಂಗ್ ಹೇಳುತ್ತಾರೆ. [ಹೆಚ್ಚಿನ ಮಾಹಿತಿಗೆ: ಆರ್ಥ್ ಅವರ್ ವೆಬ್ ತಾಣ ನೋಡಿ]
ನಟ
ಅಮೀರ್
ಖಾನ್,
ಕ್ರಿಕೆಟಿಗ
ಸಚಿನ್
ತೆಂಡೂಲ್ಕರ್,
ಮೋಹನದಾಸ್
ಪೈ
ಮುಂತಾದವರು
ಈ
ಚಳವಳಿಗೆ
ಪ್ರತಿವರ್ಷದಂತೆ
ಬೆಂಬಲ
ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ
ಎಸ್ಟೀಮ್
ಮಾಲ್,
ಬ್ರಿಗೇಡ್
ರಸ್ತೆಯ
ಮಳಿಗೆಗಳು,
ಕೆಲವು
ಅಪಾರ್ಟ್ಮೆಂಟ್
ಗಳಲ್ಲಿ
ಅರ್ಥ್
ಅವರ್
ಅನ್ನು
ಆಚರಿಸಿಕೊಂಡು
ಬರಲಾಗಿದೆ.