ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅರ್ಥ್ ಅವರ್' ಆಚರಿಸಿ, ಶಕ್ತಿ ಉಳಿಸಿ: ಸಚಿವೆ ಶೋಭಾ

By Mahesh
|
Google Oneindia Kannada News

Shobha Karandlaje
ಬೆಂಗಳೂರು, ಮಾ.30: ಅರ್ಥ್ ಅವರ್ ಎಂಬ ಅರ್ಥಪೂರ್ಣ ಚಳವಳಿ ಮತ್ತೆ ಬಂದಿದೆ. ಜಾಗತಿಕ ತಾಪಮಾನ ಹಾಗೂ ವಿಪರೀತವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಉಂಟಾಗುತ್ತಿರುವ ಅನಾಹುತಗಳನ್ನು ತಡೆಗಟ್ಟಲು ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಈ ಅಭಿಯಾನಕ್ಕೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಕೈ ಜೋಡಿಸಿದ್ದಾರೆ.

ಭಾರತದಲ್ಲಿ ಈ ಬಾರಿ ಮಾ.31ರಂದು ಶನಿವಾರ ರಾತ್ರಿ 8.30 ನಿಮಿಷಕ್ಕೆ ಅರ್ಥ್ ಅವರ್ ಆರಂಭವಾಗಲಿದ್ದು 9.30 ಗಂಟೆವರೆಗೆ ಆಚರಣೆ ಇರುತ್ತದೆ. ಪರಿಸರ ಸಂರಕ್ಷಣೆಗಾಗಿ ವಿದ್ಯುತ್ ದೀಪಗಳನ್ನು ಸ್ವಿಚ್ ಆಫ್ ಮಾಡಿ ಎಂದು ಸಚಿವೆ ಶೋಭಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿಶ್ವದಾದ್ಯಂತ ನಡೆಯುವ ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳುತ್ತಿವೆ. ಸಿಡ್ನಿಯಲ್ಲಿ 2007ರಲ್ಲಿ ಆರಂಭವಾದ ಈ ಚಳವಳಿಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಅರ್ಥ್ ಅವರ್ ಕೇವಲ ಒಂದು ಗಂಟೆ ವಿದ್ಯುತ್ ದೀಪ ಆರಿಸುವ ಕ್ರಿಯೆಯಾಗದೆ, ಜಾಗತಿಕ ತಾಪಮಾನ ಹೆಚ್ಚಳವನ್ನು ತಗ್ಗಿಸಲು ಪ್ರತಿ ದಿನ ಪ್ರಯತ್ನ ಪಡೆಬೇಕಾಗಿದೆ ಎಂದು ಡಬ್ಲ್ಯೂಡಬ್ಲ್ಯೂಎಫ್ ನ ಸಿಇಒ ರವಿ ಸಿಂಗ್ ಹೇಳುತ್ತಾರೆ. [ಹೆಚ್ಚಿನ ಮಾಹಿತಿಗೆ: ಆರ್ಥ್ ಅವರ್ ವೆಬ್ ತಾಣ ನೋಡಿ]

ನಟ ಅಮೀರ್ ಖಾನ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮೋಹನದಾಸ್ ಪೈ ಮುಂತಾದವರು ಈ ಚಳವಳಿಗೆ ಪ್ರತಿವರ್ಷದಂತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಎಸ್ಟೀಮ್ ಮಾಲ್, ಬ್ರಿಗೇಡ್ ರಸ್ತೆಯ ಮಳಿಗೆಗಳು, ಕೆಲವು ಅಪಾರ್ಟ್ಮೆಂಟ್ ಗಳಲ್ಲಿ ಅರ್ಥ್ ಅವರ್ ಅನ್ನು ಆಚರಿಸಿಕೊಂಡು ಬರಲಾಗಿದೆ.

English summary
Bangalore is getting ready to participate in World Wide Federation initiative where citizen across the globe turn off lights for an hour. This is the action against Climate Change due to Global Warning. The event first began in Sydney in 2007. WWF-India will run it on March 27, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X