ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿರಿಯ ವೇದಿಕೆಯಿಂದ ದೂರವೇ ಉಳಿದ ಶಕುಂತಳಾ
ಬಿಜೆಪಿಯ ಹಿರಿಯರ ವೇದಿಕೆಯ ರಾಜಕೀಯ ಚಟುವಟಿಕೆ ಮತ್ತು ನಿಲುವಿಗೂ ಸ್ವಾಭಿಮಾನಿ ವೇದಿಕೆಗೂ ಯಾವುದೇ ಸಂಬಂಧ ಇಲ್ಲ. ಹಿರಿಯರ ವೇದಿಕೆಯಲ್ಲಿ ಇರುವವರು ಈಗಲೂ ಬಿಜೆಪಿಯಲ್ಲೇ ಇದ್ದಾರೆ. ನಾನೂ ಸೇರಿದಂತೆ ಸ್ವಾಭಿಮಾನಿ ವೇದಿಕೆಯಲ್ಲಿ ಇರುವ ಹಲವರು ಬಿಜೆಪಿಯಿಂದ ಹೊರ ಹಾಕಲ್ಪಟ್ಟವರು. ಆದ ಕಾರಣ ಬಿಜೆಪಿ ಹಿರಿಯರ ವೇದಿಕೆಗೂ ಸ್ವಾಭಿಮಾನಿ ವೇದಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಶಕುಂತಳಾ ವಿವರಣೆ ನೀಡಿದ್ದಾರೆ.
ಬಿಜೆಪಿ ಹಿರಿಯರ ವೇದಿಕೆಯ ಮುಂದಾಳುಗಳಾದ ಕೆ. ರಾಮಭಟ್, ಅಣ್ಣಾ ವಿನಯಚಂದ್ರ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ವಾಭಿಮಾನಿ ವೇದಿಕೆಯಲ್ಲಿ ಸಕ್ರಿಯರಾಗಿದ್ದವರು. ಬಿಜೆಪಿಯ ಆಂತರಿಕ ವಿಚಾರಗಳ ಕುರಿತು ಪ್ರಶ್ನಿಸಿ, ಚುನಾವಣೆಯಲ್ಲಿ ಸ್ವಾಭಿಮಾನಿ ವೇದಿಕೆಯನ್ನು ಕಣಕ್ಕಿಳಿಸಿದವರೂ ಹೌದು. ಆದರೆ ಅವರು ಈಗಲೂ ಬಿಜೆಪಿಯಲ್ಲಿದ್ದಾರೆ ಎಂದು ಶಕುಂತಳಾ ಹೇಳಿದರು.
Comments
ಉರಿಮಜಲು ರಾಮಭಟ್ ಯಡಿಯೂರಪ್ಪ ಸದಾನಂದ ಗೌಡ ಅಡ್ವಾಣಿ ಬಿಜೆಪಿ ಬಿಕ್ಕಟ್ಟು yediyurappa bjp lk advani urimajalu rambhat
English summary
Karnataka BJP battle - Former leader of BJP Shakuntala Shetty has said that she along with Swabhimani Vedike is keeping distance with BJP Hiriyara Vedike and senior BJP leader and former Puttur MLA Urimajalu K Ram Bhat.
Story first published: Thursday, March 29, 2012, 16:10 [IST]