ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಚಕರಿಗೆ ಫ್ರೀ ಬೈಸಿಕಲ್ ಕೊಟ್ಟ ಕೃಷ್ಣಯ್ಯ ಶೆಟ್ಟಿ

By Mahesh
|
Google Oneindia Kannada News

ಮುಳಬಾಗಲು, ಮಾ.29: ಇಲ್ಲಿನ ಜಮ್ಮನಹಳ್ಳಿ ಕ್ರಾಸ್ ಬಳಿ ಹಲವು ದೇವಾಲಯಗಳ ಅರ್ಚಕರನ್ನು ಒಟ್ಟುಗೂಡಿಸಿದ ಮಾಲೂರು ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮುಖ್ಯವಾಗಿ 421 ಮಂದಿ ಅರ್ಚಕರಿಗೆ ಉಚಿತ ಸೈಕಲ್ ವಿತರಣೆ ಮಾಡಿದರು.

ನಂತರ ಜಮ್ಮನಹಳ್ಳಿ ಕ್ರಾಸ್ ಬಳಿ 4.5 ಎಕರೆ ಜಮೀನಿನ ಪೈಕಿ ಒಂದು ಎಕರೆ ಜಮೀನಿನಲ್ಲಿ ವೇದಪಾಠ ಶಾಲೆ ಮತ್ತು ವಿಶ್ರಾಂತಿ ಧಾಮದ ಗುದ್ದಲಿ ಪೂಜೆ ನೆರವೇರಿಸಿದರು.5 ಕೋಟಿ ವೆಚ್ಚದ ವೇದಪಾಠ ಶಾಲೆ, ವಿಶ್ರಾಂತಿಧಾಮ, ಅಡುಗೆ ಕೋಣೆ, ಸ್ತ್ರೀಯರಿಗೆ ಮತ್ತು ಪುರುಷರಿಗೆ 500 ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಕೃಷ್ಣಯ್ಯ ಶೆಟ್ಟಿ ಹೇಳಿದರು.

ತಿರುಪತಿ ಯಾತ್ರಾರ್ಥಿಗಳ ಗಮನಕ್ಕೆ: ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು ಹಾಗೂ ಬೇರೆ ಊರುಗಳಿಗೆ ಮುಳಬಾಗಲು ಮಾರ್ಗವಾಗಿ ತಿರುಪತಿ ತಿರುಮಲ ದೇವಸ್ಥಾನದ ಯಾತ್ರೆಗೆ ಹೋಗಿ ಬರುವ ಯಾತ್ರಾರ್ಥಿಗಳಿಗೆ ಜಮ್ಮನಹಳ್ಳಿ ಕ್ರಾಸ್ ಬಳಿ ವಿಶ್ರಾಂತಿಧಾಮ ಹಾಗೂ 24 ಗಂಟೆಗಳ ದಿನ ನಿತ್ಯ ತಿಂಡಿ ಮತ್ತು ಊಟದ ವ್ಯವಸ್ಥೆ, ಉಚಿತವಾಗಿ ಯಾತ್ರಾರ್ಥಿಗಳಿಗೆ ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಶಾಸಕ ಕೃಷ್ಣಯ್ಯಶೆಟ್ಟಿ ತಿಳಿಸಿದ್ದಾರೆ.

English summary
Malur MLA Krishnaiah Shetty distributed free bicycle to archaks in Mulbal taluk of Kolar District. Free meal service will be provide those who take Tirumala Tirupati pilgrimage at Jummanahalli Cross he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X