ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇನ್ಫಿ ಸುಧಾಮೂರ್ತಿ ವೈಷ್ಣೋದೇವಿ ಟ್ರಸ್ಟ್ ಗೆ ನೇಮಕ
ಮತ್ತೊಬ್ಬ ಕನ್ನಡಿಗ, ದೆಹಲಿ ಮೆಟ್ರೋ ನಿಗಮದ ಮಾಜಿ ಅಧ್ಯಕ್ಷ ಇ. ಶ್ರೀಧರನ್ ಅವರಿಗೂ ಈ ಪ್ರತಿಷ್ಠಿತ ಮಂಡಳಿಯನ್ನು ಅಲಂಕರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್.ಎನ್. ವೋಹ್ರಾ ಅವರು ವೈಷ್ಣೋದೇವಿ ಧರ್ಮದರ್ಶಿ ಮಂಡಳಿಯನ್ನು ಮಂಗಳವಾರ ಪುನರ್ ರಚನೆ ಮಾಡಿದ್ದಾರೆ.
ಒಟ್ಟು 6 ಸದಸ್ಯರ ಸಮಿತಿಗೆ ನೇಮಗೊಂಡ ಇತರೆ ಖ್ಯಾತನಾಮರು: ಖ್ಯಾತ ಸಂತೂರ್ ವಾದಕ ಶಿವಕುಮಾರ್ ಶರ್ಮಾ, ಜಮ್ಮು ಕೇಂದ್ರೀಯ ವಿವಿ ಕುಲಸಚಿವ ಎಸ್ಎಸ್ ಬೋರಿಯಾ, ಮಾಜಿ ಡಿಜಿಪಿ ಅಶೋಕ್ ಭಾನ್, ಜ-ಕಾ ಲೋಕಸೇವಾ ಆಯೋಗದ ಸದಸ್ಯ ಎಚ್ಎಲ್ ಮಾಯಿನಿ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀ ಮಾತಾ ವೈಷ್ಣೋದೇವಿ ಟ್ರಸ್ಟ್ ಧರ್ಮದರ್ಶಿ ಮಂಡಳಿ (SMVDSB) ಸಿಇಒ ನವೀನ್ ಕುಮಾರ್ ಚೌಧರಿ ತಿಳಿಸಿದ್ದಾರೆ.
Comments
English summary
Infosys Foundation Chairperson Sudha Murthy and 'Metroman' E Sreedharan (both kannadigas) are among six eminent personalities nominated by Jammu and Kashmir Governor N N Vohra for the Shri Mata Vaishno Devi Shrine Board.
Story first published: Wednesday, March 28, 2012, 11:35 [IST]