ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನಾ ರೆಡ್ಡಿಯಿಂದ ಕೊಲೆ ಬೆದರಿಕೆ: ಟಪಾಲ್
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಸಂಬಂಧ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜನಾರ್ದನ ರೆಡ್ಡಿಯಿಂದ ತನಗೆ ಜೀವ ಬೆದರಿಕೆಯಿದೆ. ಅವರು ಅಲ್ಲಿ ಕೆಲ ಕೈದಿಗಳೊಂದಿಗೆ ಶಾಮೀಲಾಗಿ ತನ್ನನ್ನು ಕೊಲ್ಲಲ್ಲು ಸಂಚು ಹೂಡಿದ್ದಾರೆ ಎಂದು ಅವರು ಆತಂಕಪಟ್ಟರು. ಇಂದು ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿದ ಅವರು, ತಮಗೆ ಪ್ರಾಣ ಭಯ ಇರುವುದರಿಂದ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದರು.
ಜನಾರ್ದನ ರೆಡ್ಡಿ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆಯ ವಿರುದ್ಧ ನಾನು ಹೋರಾಟ ನಡೆಸಿದ್ದೆ. ಇದರಿಂದಾಗಿ ಈ ಹಿಂದೆಯೂ ಜನಾರ್ದನ ರೆಡ್ಡಿ ತನ್ನ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರಿಗೆ ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಇದೀಗ ನನ್ನ ಕೊಲೆಗೆ ಸಂಚು ರೂಪಿಸಿದ್ದು, ನನಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಟಪಾಲ್ ಗಣೇಶ ಪೊಲೀಸರನ್ನು ಕೋರಿದ್ದಾರೆ.
Comments
ಟಪಾಲ್ ಗಣೇಶ್ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಸಿಬಿಐ ಬೆಂಗಳೂರು ಹೈದರಾಬಾದ್ ಬಳ್ಳಾರಿ illegal mining janardhana reddy cbi bangalore
English summary
Janardhana Reddy who is serving JC at the Parappana Agrahara jail is planning to kill me alleged Tapal Ganesh, also a mining baron. He also demanded Janardhana Reddy to be sent back to Chanchalaguda Jail in Hyderabad.
Story first published: Wednesday, March 28, 2012, 16:39 [IST]