ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಸಾರ್ಟಿನಲ್ಲೆ ಆಚಾರ್ಯರಿಗೆ ಯಡಿಯೂರಪ್ಪ ಸಂತಾಪ!
ಏನಾಯಿತೆಂದರೆ ಪಕ್ಷದ ಹೈಕಮಾಂಡ್ ಆದೇಶದಂತೆ ಬಜೆಟ್ ಅಧಿವೇಶನ ಮಂಗಳವಾರ ಅಬಾಧಿತವಾಗಿ ಆರಂಭವಾಗಿದೆ. ಅಧಿವೇಶನದ ಮೊದಲ ದಿನ ರೂಢಿಯಂತೆ ನಿಧನರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಅದರಂತೆ ಇತ್ತೀಚೆಗೆ ನಿಧನರಾದ ವಿಎಸ್ ಆಚಾರ್ಯರಿಗೆ ಇಂದು ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆ ವೇಳೆ ಆಡಳಿತಾರೂಢ ಸದಸ್ಯರ ಪೈಕಿ ಕೇವಲ 34 ಮಂದಿ ಸದನದಲ್ಲಿ ಹಾಜರಿದ್ದರು.
ಗಮನಾರ್ಹವೆಂದರೆ ಸೂಕ್ತ ಸ್ಥಾನಮಾನ ಸಿಗಲಿಲ್ಲವೆಂದು ಸೆಟೆದುಕೊಂಡಿರುವ ಯಡಿಯೂರಪ್ಪ ಪಟಾಲಂ ಶಿಸ್ತಾಗಿ ತಾವು ಉಳಿದುಕೊಂಡಿರುವ ಗೋಲ್ಡನ್ ಪಾಮ್ ರೆಸಾರ್ಟಿನಲ್ಲೇ ಅಗಲಿದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಧನ್ಯರಾದರು. ಆ ಮೂಲಕ ಹೊಸ ಸಂಪ್ರದಾಯದಕ್ಕೂ ನಾಂದಿ ಹಾಡಿದರು. ಈ ಮಧ್ಯೆ, ಯಡಿಯೂರಪ್ಪನವರ 'ವರದಿಗಾರರಾಗಿ' ಉದಾಸಿ ಮತ್ತು ಜಗದೀಶ್ ಶೆಟ್ಟರ್ ಅಧಿನೇಶನದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಯಡಿಯೂರಪ್ಪ ಬಣದಿಂದ ಮತ್ಯಾರೂ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ.
Comments
ಯಡಿಯೂರಪ್ಪ ವಿಎಸ್ ಆಚಾರ್ಯ ಉಡುಪಿ ಬೆಂಗಳೂರು ಬಜೆಟ್ ಬಿಜೆಪಿ ಬಿಕ್ಕಟ್ಟು ಸದಾನಂದ ಗೌಡ yediyurappa bjp sadananda gowda udupi vs acharya ರೆಸಾರ್ಟ್
English summary
Karnataka BJP battle Team BS Yeddyurappa condole death of VS Acharya in Resort. Where as only 34 members of ruling BJP take part in Budget session today (Mar 20)
Story first published: Tuesday, March 20, 2012, 12:32 [IST]