ಅಸೆಂಬ್ಲಿಯಲ್ಲಿ ಬ್ಲೂ ಫಿಲಂ ನೋಡಿದವರ ಹೆಸರು ಲೀಕ್
ಇನ್ನಿಬ್ಬರು ಸಚಿವರುಗಳಾದ ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ಅವರ ವಿರುದ್ಧದ ಆರೋಪ ಸಾಬೀತುಪಡಿಸಬಲ್ಲ ಸಾಕ್ಷ್ಯಾಧಾರಗಳಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ಬರೆದಿದೆ ಎಂದು ಹೇಳಲಾಗಿದೆ.
ಶ್ರೀಶೈಲಪ್ಪ ಬಿದರೂರು ನೇತೃತ್ವದ ಸಮಿತಿ ಲಕ್ಷ್ಮಣ್ ಸವದಿ ಅವರನ್ನು ಸದನಕ್ಕೆ ಕರೆಸಿ ಎಚ್ಚರಿಕೆ ನೀಡುವಂತೆ ಕೂಡಾ ಶಿಫಾರಸು ಮಾಡಿದೆ. ಸ್ಪೀಕರ್ ಅವರು ನೀಡಿದ್ದ ಆದೇಶದ ಅನ್ವಯ ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದೇವೆ. 38 ಪುಟಗಳ ವರದಿ ಮತ್ತು ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದೇವೆ. ಯಾವುದೇ ಪಕ್ಷಪಾತವಿಲ್ಲದೆ ವರದಿ ಸಿದ್ಧಪಡಿಸಿ ಸ್ಪೀಕರ್ ಅವರಿಗೆ ಸಲ್ಲಿಸಿದ್ದೇವೆ ಎಂದು ಶ್ರೀಶೈಲಪ್ಪ ಸುದ್ದಿಗಾರರಿಗೆ ತಿಳಿಸಿದರು.
ಇದೇ ಪ್ರಕರಣದಲ್ಲಿ ಸಿಲುಕಿದ್ದ ಮಾಜಿ ಸಚಿವರಾದ ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ವಿರುದ್ಧ ಆರೋಪ ಸಾಬೀತುಪಡಿಸುವ ಸಾಕ್ಷ್ಯಗಳು ಲಭ್ಯವಾಗಿಲ್ಲ. ಈ ಇಬ್ಬರಿಗೆ ಸಂಬಂಧಿಸಿದಂತೆ ಮುಂದಿನ ತೀರ್ಮಾನ ಕೈಗೊಳ್ಳುವುದನ್ನು ಸ್ಪೀಕರ್ ವಿವೇಚನೆಗೆ ಬಿಟ್ಟಿರುವುದಾಗಿ ಸಮಿತಿ ಅಭಿಪ್ರಾಯಪಟ್ಟಿದೆ.
ಸಮಿತಿ ಮಾಡಿದ ಶಿಫಾರಸು
*
ಕೆಲ
ಮಾಧ್ಯಮಗಳು
ಸದನದಲ್ಲಿ
ನಡೆದ
ಘಟನೆಗೆ
ತಳುಕು
ಹಾಕಿ
ಇತರೆ
ದೃಶ್ಯಗಳನ್ನೂ
ಸೇರಿಸಿ
ವರ್ಣರಂಜಿತವಾಗಿ
ಪ್ರಸಾರ
ಮಾಡಿವೆ.
ಇಂತಹ
ಘಟನೆಗಳು
ನಡೆಯದಂತೆ
ಕಡಿವಾಣ
ಹಾಕಬೇಕು.
*
ಸದನದ
ಕಲಾಪಗಳ
ನೇರ
ಪ್ರಸಾರಕ್ಕೆ
ಮಾಧ್ಯಮಗಳಿಗೆ
ಅವಕಾಶ
ನೀಡಬೇಕು.
*
ಸದನದ
ಕಲಾಪಕ್ಕೆ
ಹೊರತಾದ
ಇತರೆ
ವಿಷಯಗಳಿಗೆ
ಸಂಬಂಧಿಸಿದ
ವರದಿ,
ಕಾರ್ಯಕ್ರಮ
ಪ್ರಸಾರ
ಮಾಡುವ
ಮುನ್ನ
ಸ್ಪೀಕರ್
ಅನುಮತಿ
ಪಡೆಯುವುದನ್ನು
ಕಡ್ಡಾಯಗೊಳಿಸಬೇಕು
*
ಸದನದ
ಒಳಗೆ
ಮೊಬೈಲ್
ತರುವುದು
ಮತ್ತು
ಬಳಸುವುದನ್ನು
ಕಡ್ಡಾಯವಾಗಿ
ನಿಷೇಧಿಸಬೇಕು.
*
ದಿನಪತ್ರಿಕೆಗಳು
ಸೇರಿದಂತೆ
ಯಾವುದೇ
ಪತ್ರಿಕೆಗಳನ್ನು
ಸ್ಪೀಕರ್
ಅನುಮತಿ
ಇಲ್ಲದೇ
ಸದನದ
ಒಳಕ್ಕೆ
ತರುವಂತಿಲ್ಲ.