ಇಂದು ಚುನಾವಣಾ ಫಲಿತಾಂಶ LIVE
ಕರ್ನಾಟಕದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಈ ಚುನಾವಣೆಯ ಫಲಿತಾಂಶವನ್ನು ಒನ್ಇಂಡಿಯ ಕನ್ನಡ ನೇರ ಪ್ರಸಾರ ಮಾಡಲಿದೆ. ಮುನ್ನಡೆ, ಮತಗಳಿಕೆ ವಿವರಗಳ LIVE ಕೋಷ್ಟಕ ಮುಂಜಾನೆ 8 ಗಂಟೆಗೆ ನಮ್ಮ ವಾಹಿನಿಯಲ್ಲಿ ಲಭ್ಯ.
ಕಣದಲ್ಲಿ ಭಾಜಪದ ಸುನಿಲ್ ಕುಮಾರ್ ಕಾರ್ಕಳ, ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗಡೆ, ಜಾತ್ಯತೀತ ಜನತಾದಳದ ಭೋಜೇಗೌಡ ಅವರುಗಳಲ್ಲದೆ 11 ಮಂದಿ ಪಕ್ಷೇತರರು ಇದ್ದಾರೆ.
2009 ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಮೇಲೆ ಇಲ್ಲಿಂದ ಸದಾನಂದ ಗೌಡರು ಗೆದ್ದಿದ್ದರು. ಏನಕೇನಪ್ರಕಾರೇಣ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಾದಿಯಿಂದ ಇಳಿಯಬೇಕಾದ ಪರಿಸ್ಥಿತಿ ಬಂತು. ಹಾಗಾಗಿ ಮುಖ್ಯಮಂತ್ರಿ-ಲಕ್ಷ್ಮಿ ಗೌಡರಿಗೆ ಒಲಿದಳು.
ಗೌಡರು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರು. ಹಾಗಾಗಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. 2014 ರಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತದೆ.
ಉಡುಪಿ ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲತ್ತೆ ಎಂದು ನಾವು ಊಹೆ ಮಾಡುವ ಗೋಜಿಗೆ ಹೋಗುವುದಿಲ್ಲ. ನೀವು? ಈ ಕೆಳಗಿನ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ನಿಮ್ಮ ಅಭಿ-ಮತ ಚಲಾಯಿಸಿ. ಬೆರಳಿಗೆ ಮಸಿ ಹಚ್ಚಿಸಿಕೊಳ್ಳುವ ಅಗತ್ಯವಿಲ್ಲ!
ನಮ್ಮ ಓದುಗರ ಆಯ್ಕೆಯನ್ನು ಆಧರಿಸಿದ ಫಲಿತಾಂಶವನ್ನು ಬುಧವಾರ ಸಂಜೆ ಪ್ರಕಟಿಸಲಾಗುವುದು. ಥ್ಯಾಂಕ್ಯು.