ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಿಚುಂಚನಗಿರಿ ಶ್ರೀ ಹೇಳಿಕೆಗೆ ಸಂಸದ ಅಂಗಡಿ ಬೇಸರ

By Mahesh
|
Google Oneindia Kannada News

MP Suresh Angadi
ನವದೆಹಲಿ, ಮಾ.19: ಲಿಂಗಾಯತ ನಾಯಕರು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆದಿಚುಂಚನಗಿರಿಶ್ರೀಗಳು ನೀಡಿರುವ ಹೇಳಿಕೆಗೆ ಸಂಸದ ಸುರೇಶ್ ಅಂಗಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಸದಾನಂದ ಗೌಡರನ್ನು ಜಾತಿ ವಿಷಯಕ್ಕಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಲು ಯಾರೂ ಯತ್ನಿಸುತ್ತಿಲ್ಲ. ಲಿಂಗಾಯತರು ಜಾತಿ ರಾಜಕೀಯ ಮಾಡುವುದಿಲ್ಲ. ಜಾತಿವಾದಿಯಿಂದ ನಾವು ದೂರವೇ ಉಳಿದಿದ್ದೇವೆ. ಒಕ್ಕಲಿಗರನ್ನು ಒಡೆಯಲು ಯತ್ನಿಸಿಲ್ಲ.

ಡಿವಿಎಸ್ ರನ್ನು ಸಿಎಂ ಮಾಡಿದ್ದು ಒಕ್ಕಲಿಗರಲ್ಲ. ದೇವೇಗೌಡ, ಕುಮಾರಸ್ವಾಮಿ ಅಲ್ಲ ಎಂಬುದು ನೆನಪಿರಲಿ.

ಹೈಕಮಾಂಡ್ ನೀಡಿದ್ದ ಭರವಸೆಯಂತೆ ಯಡಿಯೂರಪ್ಪ ಅವರಿಗೆ ನೀಡಬೇಕಿರುವ ಸ್ಥಾನಕ್ಕಾಗಿ ಆಗ್ರಹಿಸುತ್ತಿದ್ದೇವೆ ಅಷ್ಟೇ. ಯಡಿಯೂರಪ್ಪ ಅವರು ಆರೋಪ ಮುಕ್ತ ರಾಗಿದ್ದಾರೆ. ಇದರಲ್ಲಿ ಜಾತಿ ರಾಜಕೀಯ ಎಲ್ಲಿಂದ ಬಂತು ಎಂದು ಸುರೇಶ್ ಅಂಗಡಿ ಶ್ರೀಗಳನ್ನು ಪ್ರಶ್ನಿಸಿದ್ದಾರೆ.

English summary
It is not battle of Vokkaliga vs Lingayat community gaining power. It is demand to get back Power Yeddyurapa and nothing else said MP Suresh Angadi. Adichunchangiri statement about Lingayat leaders is hurted us he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X