ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಿಂದ ನಾಮಬಲದಲ್ಲಿ ಶ್ರೀರಾಮುಲು ಏಳಿಗೆ

By Mahesh
|
Google Oneindia Kannada News

Sriramulu
ತುಮಕೂರು, ಮಾ.12: ಹಿಂದುಳಿದವರ ನಾಮಬಲದಿಂದ ಆರ್ ಎಲ್ ಜಾಲಪ್ಪ ಮತ್ತು ಸಿದ್ದರಾಮಯ್ಯ ಅಧಿಕಾರ ಪಡೆದು ಎಲ್ಲಾ ಸುಖ ಅನುಭವಿಸಿದರು. ಈಗ ಶ್ರೀರಾಮುಲು ಅವರು ಕೂಡಾ ಅದೇ ಹಾದಿ ಹಿಡಿದಿದ್ದಾರೆ. ಅವರು ಏನು ಮಾಡುತ್ತಾರೆ ನೋಡೋಣ..ಆದಿಮ ಮುಖ್ಯಸ್ಥ ಹಾಗು ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ ಹೇಳಿದ್ದಾರೆ.

ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿಗಳ ಸಬಲೀಕರಣ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಹಿಂದ ಚಳವಳಿ ಸ್ಥಿತಿಗತಿ ಹದಗೆಟ್ಟಿದೆ. ಜೊತೆಗೆ ದಲಿತ ಚಳವಳಿಯೂ ಸಹ ಹಾದಿ ತಪ್ಪಿದೆ.

ಸ್ವಾತಂತ್ರಾನಂತರವೂ ಅಲೆಮಾರಿ ಸಮುದಾಯಗಳಿಗೆ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ಕುಡಿಯುವ ನೀರು, ಸೂರು, ಶಿಕ್ಷಣ ಯಾವುದು ದೊರೆತಿಲ್ಲ ಎಂದು ವಿಷಾದಿಸಿದರು.

ಗೃಹ ಕೈಗಾರಿಕೆಗಳು ನಾಶಗೊಂಡಿವೆ. ಪೊರಕೆಗಳ ಮಾರುಕಟ್ಟೆ ಕೇವಲ ಎಂಟು ಕುಟುಂಬಗಳ ಕೈಯಲ್ಲಿದೆ. ಇದರಿಂದ ಅಲೆಮಾರಿಗಳ ಬದುಕುವ ಎಲ್ಲಾ ದಾರಿಗಳು ಮುಚ್ಚಿ ಹೋಗಿವೆ. ಕುಲ ಕಸುಬುಗಳಿಂದ ಆದಾಯ ಸಿಗುತ್ತಿಲ್ಲ. ಅವಮಾನ ಆಗುತ್ತಿದೆ ಎಂಬ ಆಲೋಚನೆಗೆ ಪರ್ಯಾಯವಾಗಿ ಯೋಚಿಸಬೇಕು. ಅದನ್ನು ಲಾಭದ ಮಾರುಕಟ್ಟೆಯನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂದು ರಾಮಯ್ಯ ಸಲಹೆ ನೀಡಿದ್ದಾರೆ.

English summary
Ahinda movement has lost its value. First RL Jalappa, Siddaramaiah now Sriramulu is using Ahinda name for his political career said Writer Kotaganalli Ramaiah at Tumur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X