ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ನಿತ್ಯಾನಂದಗೆ ಜಿಲ್ಲಾಧಿಕಾರಿ ಎಚ್ಚರಿಕೆ

By Srinath
|
Google Oneindia Kannada News

swami-nithyananda-warned-illegal-construction-ashram
ರಾಮನಗರ, ಮಾ.11: ಬಿಡದಿ ಬಳಿಯ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ಆಶ್ರಮಕ್ಕೆ ರಾಮನಗರ ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ ಶುಕ್ರವಾರ ದಿಢೀರನೆ ಭೇಟಿ ನೀಡಿ, 'ಆಶ್ರಮದಲ್ಲಿ ಭೂ ಪರಿವರ್ತನೆಯಾಗದೆ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಬಾರದು' ಎಂದು ಎಚ್ಚರಿಕೆ ನೀಡಿದ್ದಾರೆ.

'ನಿತ್ಯಾನಂದ ಸ್ವಾಮೀಜಿಗೆ ಬಿಡದಿ ಬಳಿ 22.20 ಎಕರೆ ಭೂಮಿ ದಾನ ರೂಪದಲ್ಲಿ ಬಂದಿದೆ. ಈ ಹಿಂದೆ ಅವರು ಎರಡು ಎಕರೆ ಭೂಮಿಯನ್ನು ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಪರಿವರ್ತನೆಯಾಗದ ಭೂಮಿಯಲ್ಲಿ ಕಟ್ಟಡ ಕಾರ್ಯಗಳನ್ನು ಕೈಗೊಳ್ಳದಂತೆ ಹಿಂದೆ ಸೂಚಿಸಲಾಗಿತ್ತು. ಅದನ್ನು ಪರಿಪಾಲಿಸಲಾಗುತ್ತಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಲು' ಆಶ್ರಮಕ್ಕೆ ಭೇಟಿ ನೀಡಿದ್ದಾಗಿ ಜಿಲ್ಲಾಧಿಕಾರಿ ಪುಟ್ಟಸ್ವಾಮಿ ತಿಳಿಸಿದ್ದಾರೆ.

'ಆಶ್ರಮಕ್ಕೆ ಭೇಟಿ ನೀಡಿದ್ದ ವಿದೇಶಿ ಭಕ್ತರ ಜತೆ ಸ್ವಾಮೀಜಿ ಇದ್ದುದರಿಂದ, ಅವರನ್ನು ಭೇಟಿಯಾಗಿಲ್ಲ' ಎಂದು ಅವರು ಹೇಳಿದರು.

English summary
Ramanagar District Collector Puttaswamy has warned Swami Nithyananda not to take illegal construction in Bidadi Ahram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X