ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರಿನಲ್ಲಿ ಮಾ.11ರಂದು 'ಲಂಕೇಶ್ 77'
ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಸಲಾಗುತ್ತಿದ್ದ ಲಂಕೇಶ್ ಅವರು ಹುಟ್ಟುಹಬ್ಬದ ಆಚರಣೆಯನ್ನು ಮೊದಲ ಬಾರಿ ಆಯೋಜಿಸಲಾಗುತ್ತಿದ್ದು, ಪುಸ್ತಕ ಬಿಡುಗಡೆ, ಲಂಕೇಶ್ ಬರಹ ಕುರಿತ ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದೆ ಎಂದು ಅವರ ಮಗಳು, ಗೌರಿ ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರು ಮಾಧ್ಯಮದವರಿಗೆ ಶನಿವಾರ ತಿಳಿಸಿದರು.
ಖ್ಯಾತ ಬರಹಗಾರ ದೇವನೂರು ಮಹಾದೇವ ಅವರು ಈ ಕಾರ್ಯಕ್ರಮವನ್ನು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ನಂತರ, 1974ರಲ್ಲಿ ಲಂಕೇಶ್ ಅವರು ಹೊರತಂದಿದ್ದ 'ಪಾಂಚಾಲಿ' ದೀಪಾವಳಿ ವಿಶೇಷಾಂಕವನ್ನು ಸುರೇಶ್ ಭಟ್ ಬಕ್ರಬೈಲ್ ಅವರು ಬಿಡುಗಡೆ ಮಾಡಲಿದ್ದಾರೆ. ಮೊದಲ ಸೆಷನ್ನಲ್ಲಿ ಕರಾವಳಿಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಇದರ ಅಧ್ಯಕ್ಷತೆ ಲೇಖಕಿ ಸಾರಾ ಅಬೂಬಕರ್ ಅವರು ವಹಿಸಲಿದ್ದಾರೆ.
Comments
English summary
Journalist, writer, film director P Lankesh's 77th birthday celebrations will be held in Mangalore on March 11. This is for the first time birthday is being held outside Bangalore, told Gowri Lankesh.
Story first published: Saturday, March 10, 2012, 16:32 [IST]