ಗಾಂಧಿ vs ಗಾಂಧಿ, ವರುಣ್ ಗೆ 'ರಾಹು'ಲ್ ಕಾಟ
ವರುಣ್ ಗಾಂಧಿ ಅವರ ವೈಯಕ್ತಿಕ ಅಭಿಪ್ರಾಯ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಕೆಲ ಕಾಲ ನಂತರ ತಿವಾರಿ ಪ್ರತಿಕ್ರಿಯಿಸಿದರು.
ಆದರೆ, ಬಲ್ಲ ಮೂಲಗಳ ಪ್ರಕಾರ ವರುಣ್ ಕಾಂಗ್ರೆಸ್ ಪ್ರವೇಶಿಸುವುದು ಸೋದರ ರಾಹುಲ್ ಗಾಂಧಿಗೆ ಇಷ್ಟವಿಲ್ಲ. ವರುಣ್ ಪ್ರವೇಶದ ಬಗ್ಗೆ ಕೇಳುವ ಪ್ರಶ್ನೆಗೆ ತಿವಾರಿ ಕೊಟ್ಟ ಉತ್ತರ ರಾಹುಲ್ ಬಾಯಿಂದ ಬಂದಂತೆ ಇತ್ತು.
ಊಹಾಪೋಹ ಸುದ್ದಿಗಳಿಗೆ ನಾವು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಯಾರಿಗಾದರೂ ಕೋಪ ಬಂದಿದ್ದರೆ, ಅವಮಾನವಾಗಿದ್ದರೆ ಅದಕ್ಕೆ ಅವರೇ ಹೊಣೆ. ಅವರನ್ನೇ ಹೋಗಿ ಕೇಳಿ ಎಂದು ಬಿಟ್ಟರು.
ಪಿಲಿಬಿತ್ ಲೋಕಸಭಾ ಕ್ಷೇತ್ರದಡಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಲು ವರುಣ್ ಗೆ ನಿರಾಕರಿಸುವುದು ವರುಣ್ ಗೆ ಸಹಜವಾಗಿ ಸಿಟ್ಟು ತರಿಸಿದೆ. ಇದರ ಹಿಂದೆ ಬಿಜೆಪಿ ಹಿರಿಯ ನಾಯಕರ ಕೈವಾಡ ಇರುವುದು ಸ್ಪಷ್ಟವಾಗಿದ್ದು, ವರುಣ್ ಕಾಂಗ್ರೆಸ್ ಬಾಗಿಲು ತಟ್ಟಲು ಕಾರಣವಾಗಿದೆ ಎನ್ನಲಾಗಿದೆ.
ಆದರೆ, ಕಾಂಗ್ರೆಸ್ ನಲ್ಲಿ ಪ್ರಾಥಮಿಕ ಸದಸ್ಯರಿಂದ ಲೋಕಸಭಾ ಸದಸ್ಯರ ತನಕ ಎಲ್ಲರ ರಿಮೋಟ್ ಕಂಟ್ರೋ ಲ್ ಈಗ ರಾಹುಲ್ ಕೈಲಿರುವುದು ವರುಣ್ ಗೆ ಮುಳುವಾಗಲಿದೆ.