ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಬೆಂಗಳೂರು ಸಿಬಿಐ ವಶಕ್ಕೆ?
ಅಸೋಸಿಯೇಟೆಡ್ ಮೈನಿಂಗ್ ಕಂಪನಿಯು (AMC) ಕರ್ನಾಟಕದಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯವುಅರುಣಾ ಹಾಗೂ ಮಾಜಿ ಗಣಿ ಮಂತ್ರಿ ಶಿಡ್ಲಘಟ್ಟದ ಮುನಿಯಪ್ಪ ಸೇರಿದಂತೆ ಒಟ್ಟು 12 ಮಂದಿ ಸಹ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದೆ. ಆದ್ದರಿಂದ ಇವರೆಲ್ಲ ವಿಚಾರಣೆಗಾಗಿ ಬೆಂಗಳೂರಿನ ನೃಪತುಂಗ ರಸ್ತೆಯ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿರುವ ಸಿಬಿಐ ವಿಶೇಷ ಕೋರ್ಟಿಗೆ ಹಾಜರಾಗಬೇಕಿದೆ. ಮುಂದೆ ಏನಾಗುತ್ತದೋ ಕಾದು ನೋಡಬೇಕು.
ಜಿಂದಾಲ್ ಸ್ಟೀಲ್ ವರ್ಕ್ಸ್ ಗೂ ಸಿಬಿಐ ಗಾಳ: ಜಿಂದಾಲ್ ಸ್ಟೀಲ್ ವರ್ಕ್ಸ್ ಅಂತಹ ಕಂಪನಿಗಳು ಪರ್ಮಿಟ್ ಇಲ್ಲದೆಯೇ AMCಯಿಂದ ಕಬ್ಬಿಣದ ಅದಿರನ್ನು ಖರೀದಿಸಿವೆ ಎಂದೂ ಸಿಬಿಐ ಆರೋಪಿಸಿದೆ. ಸೀಮಗಾಪುರದಲ್ಲಿ Man-Go Pub Private Limited ಎಂಬ ಕಂಪನಿಯನ್ನು ಖರೀದಿಸಿದ ರೆಡ್ಡಿ ಕುಟುಂಬ ಅದಕ್ಕೆ Gali Lakshmi Aruna International ಎಂದು ಮರುನಾಮಕರ ಮಾಡಿ ಬೇನಾಮಿಯಾಗಿ ಅವ್ಯವಹಾರದಲ್ಲಿ ತೊಡಗಿತ್ತು ಎಂದೂ ಸಿಬಿಐ FIR ನಲ್ಲಿ ದಾಖಲಾಗಿದೆ.