ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರುಣಾಕರ ರೆಡ್ಡಿಯಿಂದ ದೂರವಾದ ಶ್ರೀರಾಮುಲು
ಅಷ್ಟೇ ಅಲ್ಲ. 'ಒಂದು ವೇಳೆ ಕರುಣಾಕರ ರೆಡ್ಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೆ ಖಂಡಿತವಾಗಿಯೂ ಅವರ ವಿರುದ್ಧ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿಯೂ' ಘೋಷಿಸಿದ್ದಾರೆ. ಇದೇ ವೇಳೆ, ಜನಾರ್ದನ ರೆಡ್ಡಿ ನನ್ನ ಹಿತೈಷಿಯಾಗಿದ್ದರೂ ಹೊಸ ಪಕ್ಷ ಸೇರುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂಬ ಸಂದೇಶವನ್ನೂ ರಾಮುಲು ನೀಡಿದ್ದಾರೆ.
'ಮಾಜಿ ಸಚಿವ ಕರುಣಾಕರ ರೆಡ್ಡಿ ಬಿಜೆಪಿ ಪಕ್ಷದಲ್ಲಿದ್ದಾರೆ. ಅವರು ನಮ್ಮ ಪಕ್ಷದ ಜತೆ ಗುರುತಿಸಿಕೊಂಡಿಲ್ಲ. ಆದರೆ ಜನಾರ್ದನ ರೆಡ್ಡಿಯವರ ಮತ್ತೊಬ್ಬ ಸೋದರ ಸೋಮಶೇಖರ ರೆಡ್ಡಿ ನಮ್ಮೊಂದಿಗೇ ಇದ್ದಾರೆ. ಇನ್ನೂ ಅನೇಕರು ದೈಹಿಕವಾಗಿ ಬಿಜೆಪಿಯಲ್ಲಿದ್ದರೂ ಮಾನಸಿಕವಾಗಿ ನಮ್ಮೊಂದಿಗೇ ಇದ್ದಾರೆ' ಎಂದು ಶ್ರೀರಾಮುಲು ಹೇಳಿದ್ದಾರೆ.
Comments
English summary
B Sriramulu, an independent MLA from Bellary rural and close aide of Janardhana Reddy has annonced that Karunakara Reddy, a BJP MLA is no more with him.
Story first published: Wednesday, February 29, 2012, 10:38 [IST]