ದಂಡ ಕಟ್ಟಲು ಭಿಕ್ಷೆ ಎತ್ತಿದ ಕನ್ನಡಪರ ಹೋರಾಟಗಾರರು
ಈ ಆದೇಶ ವಿರೋಧಿಸಿ ಕರ್ನಾಟಕ ಕಾವಲು ಪಡೆ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಫೆಬ್ರವರಿ 6, 2007 ರಂದು ಕರ್ನಾಟಕದ ವಿರುದ್ದ ಕಾವೇರಿ ಪ್ರಾಧಿಕಾರ ತೀರ್ಪು ನೀಡಿದ್ದನು ಖಂಡಿಸಿ ಕನ್ನಡಪರ ಸಂಘಟನೆಗಳು ರೈಲು ತಡೆದು ಪ್ರತಿಭಟನೆ ನಡೆಸಿದ್ದವು. ಈ ಸಂಬಂಧ ರೈಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಏಳು ಮಂದಿ ಹೋರಾಟಗಾರರಿಗೆ 21 ದಿನ ನ್ಯಾಯಾಂಗ ಬಂಧನ ಅಥವಾ 1200 ದಂಡ ನೀಡುವಂತೆ ತೀರ್ಪು ನೀಡಿದ್ದರು. ಈ ತೀರ್ಪನ್ನು ವಿರೋಧಿಸಿ ಕರ್ನಾಟಕ ಕಾವಲು ಪಡೆ ಹಾಗೂ ಕನ್ನಡ ವೇದಿಕೆ, ಕಬಿನಿ ಹೋರಾಟ ಹಿತರಕ್ಷಣಾ ಸಮಿತಿ ಸೇರಿದಂತೆ ನೂರಾರು ಕಾರ್ಯಕರ್ತರು ಬುಧವಾರ (ಫೆ 15) ಪ್ರತಿಭಟನೆ ನಡೆಸಿದರು.
ನ್ಯಾಯಾಲಯವು ಏಳು ಮಂದಿಗೆ ವಿಧಿಸಿರುವ 8400 ರೂ. ದಂಡದಲ್ಲಿ 4500 ರೂ.ಗಳನ್ನು ಸಾರ್ವಜನಿಕರಿಂದ ಭಿಕ್ಷೆ ಮೂಲಕ ಹಣವನ್ನು ಸಂಗ್ರಹಿಸಿದರು. ಉಳಿದ ಹಣವನ್ನು ಕಾರ್ಯಕರ್ತರಿಂದ ಸಂಗ್ರಹಿಸಿ ದಂಡ ಪಾವತಿಸಿದರು.