ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣಪ್ಪ,ಪ್ರಿಯಕೃಷ್ಣ ಮನೆ ಮೇಲೆ ಲೋಕಾಯುಕ್ತ ದಾಳಿ
ಎಂ ಕೃಷ್ಣಪ್ಪ ಅವರ ಪುತ್ರ, ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ ಅವರ ಮನೆಯ ಮೇಲೂ ನಗರ ಲೋಕಾಯುಕ್ತ ಡಿವೈಎಸ್ಪಿ ಪೊನ್ನರಾಜು ನೇತೃತ್ವದ ಎರಡು ತಂಡಗಳು ಮುಂಜಾನೆ ದಾಳಿಯಿಟ್ಟಿವೆ. ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರ 2 ಮನೆ ಹಾಗೂ 2 ಕಚೇರಿಗಳನ್ನು ಶೋಧಿಸುತ್ತಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಹೊತ್ತ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 156 (3) ಕಲಮಿನ ಅಡಿ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಲೋಕಾಯುಕ್ತ ಪೊಲೀಸರಿಗೆ ಜನವರಿ 17ರಂದು ಆದೇಶಿಸಿದ್ದರು.
ರಾಜಾಜಿನಗರ ನಿವಾಸಿ ಎಚ್. ಸಿ.ಪ್ರಕಾಶ್ ಸಲ್ಲಿಸಿರುವ ಖಾಸಗಿ ದೂರು ಇದಾಗಿದೆ. ಕೃಷ್ಣಪ್ಪ, ಅವರ ಪುತ್ರ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ಪತ್ನಿ ಪ್ರಿಯದರ್ಶಿನಿ ಹಾಗೂ ಪುತ್ರ ಪ್ರದೀಪ್ ಇತರ ಆರೋಪಿಗಳು. ಇವರ ವಿರುದ್ಧವೂ ತನಿಖೆ ನಡೆದಿದೆ.
Comments
ಗೋವಿಂದರಾಜ ನಗರ ಕೃಷ್ಣಪ್ಪ ಶಾಸಕ ಲೋಕಾಯುಕ್ತ ಲೋಕಾಯುಕ್ತ ದಾಳಿ ನ್ಯಾ ಸುಧೀಂದ್ರರಾವ್ ವಿಜಯನಗರ ಆದಾಯ ತೆರಿಗೆ ಆಸ್ತಿ ಬಂಧನ assets govindarajanagar vijayanagar krishnappa ಕಾಂಗ್ರೆಸ್
English summary
Illegal Assets Case- A private complaint is filed against Vijayanagar constituency Congress legislator M Krishnappa, his son Priya Krishna, MLA of Govindrajnagar constituency, and other family members in the Special Lokayukta Court. As a follow up Lokayukta police raided both MLAs Houses in Bangalore today (Feb 16)
Story first published: Thursday, February 16, 2012, 9:10 [IST]