ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಅನಂತಸ್ವಾಮಿ, ರಾಜುಗೆ ಅವಿರತ ನಮನ

By Mahesh
|
Google Oneindia Kannada News

Musician Raju Ananthaswamy
ಬೆಂಗಳೂರು, ಫೆ.9 : ಕರ್ನಾಟಕ ಕಂಡ ಪ್ರತಿಭಾವಂತ ಗಾಯಕ, ಸಂಗೀತ ಸಂಯೋಜಕ, ನಟ, ಬಹುಮುಖ ಪ್ರತಿಭೆಯಾಗಿದ್ದ 'ರಾಜು ಅನಂತಸ್ವಾಮಿ' ಹಾಗೂ ಸಂಗೀತ ಲೋಕದ 'ದೊರೈ' ಎನಿಸಿದ್ದ ಮೈಸೂರು ಅನಂತಸ್ವಾಮಿ ಅವರ ನೆನಪಿನ ಸಂಗೀತ ಸಂಜೆಯನ್ನು ಅವಿರತ ಟ್ರಸ್ಟ್ ಆಯೋಜಿಸಿದೆ.

ಅನಂತ ಚೇತನ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ವಿಶೇಷವಾಗಿ 'ರತ್ನನ್ ಪದ' ಮತ್ತು ಭಾವ ತುಂಬಿದ ಹಾಡುಗಳ ಸುಗ್ಗಿಯನ್ನು ಕಾಣಬಹುದು

ರಾಜು ಅನಂತಸ್ವಾಮಿಯ ಶಿಷ್ಯ ರವಿ ಮೂರೂರು ಮತ್ತು ತಂಡದಿಂದ ರತ್ನನ್ ಪದ ಹಾಗೂ ಕೈಲಾಸಂ ಹಾಡುಗಳ ಸುಗ್ಗಿಯನ್ನು ಸವಿಯಲು ಕೆ.ಎಚ್ ಕಲಾಸೌಧಕ್ಕೆ ಬರಲೇ ಬೇಕು.

ಕಾರ್ಯಕ್ರಮದ ದಿನಾಂಕ: ಫೆ.11, ಶನಿವಾರ
ಸ್ಥಳ: ಕೆ.ಎಚ್.ಕಲಾಸೌಧ ರಾಮಾಂಜನೇಯ ಗುಡ್ಡದ ಆವರಣ, ಹನುಮಂತ ನಗರ ಬೆಂಗಳೂರು
ಸಮಯ: ಸಂಜೆ 6:30 ರಿಂದ 8:30
ಟಿಕೆಟ್ ದರ: ರು.100
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 98800 86300
[email protected], www.aviratha.org

ನೋಟ್ ಬುಕ್ ವಿತರಣಾ ಯೋಜನೆ 2012: ಗ್ರಾಮಾಂತರ/ಹಿಂದುಳಿದ ಪ್ರದೇಶಗಳಲ್ಲಿ ಅಭ್ಯಾಸ ಮಾಡುತ್ತಿರುವ ಸರ್ಕಾರಿ ಶಾಲೆಯ ಸುಮಾರು 10,000 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಂಚುವ ಯೋಜನೆಯನ್ನು ಅವಿರತ ಪ್ರತಿಷ್ಠಾನ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಈ ಯೋಜನೆಗೆ ಬಳಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಕೆಟಿ ಸತೀಶ್ ಗೌಡ ಅವರು ಹೇಳಿದ್ದಾರೆ.

English summary
Aviratha Trust in association with Global Events, Visimax and BangaloreXPo have jointly organised a musical tribute program to late Musician Mysore Ananthaswamy and Raju Ananthaswamy on Feb.11 at KH Kala Soudha, Bangalore. Ravi Muroor and team will enlighten the audience and ticket collection will be funded to Note Book Distribution Drive program started by the trust.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X