ಕೊನೆಗೂ ಲೋಕಪೀಠ ಬೇಡವೆಂದ ಬನ್ನೂರಮಠ
ಕೇರಳ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್ಆರ್ ಬನ್ನೂರಮಠ ಅವರು ಲೋಕಪೀಠ ತಿರಸ್ಕರಿಸುತ್ತಿದ್ದಂತೆ ಅವರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಐದು ತಿಂಗಳ ಹಿಂದೆ ಕಳುಹಿಸಿದ್ದ ಪ್ರಸ್ತಾವವನ್ನು ರಾಜ್ಯಪಾಲ ಭಾರದ್ವಾಜ್ ಅವರು ತಿರಸ್ಕರಿಸಿದ್ದಾರೆ. ಸೋಮವಾರ ರಾತ್ರಿ ಏಳು ಗಂಟೆಯ ಸುಮಾರಿಗೆ ಈ ಸಂಬಂಧದ ಕಡತವನ್ನು ರಾಜಭವನದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಗೆ ವಾಪಸ್ ಕಳುಹಿಸಲಾಗಿದೆ.
ಆದರೆ ಕಳಂಕಿತ ನ್ಯಾ ಬನ್ನೂರುಮಠ ಅವರು ಲೋಕಾಯುಕ್ತ ಪೀಠ ತಿರಸ್ಕರಿಸಲು ಇಷ್ಟೊಂದು ತಡಮಾಡಿದ್ದೇಕೆ ಎಂದು ರಾಜಭವನದ ಗೋಡೆಗಳು ಕೇಳುತ್ತಿವೆ. ಇದಕ್ಕೆ ಉತ್ತರ ನೀಡುವ ಸಲುವಾಗಿ ನ್ಯಾ ಬನ್ನೂರುಮಠ ಅವರು ಇಂದು 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿ, ಅಲ್ಲಿ ಎಲ್ಲವನ್ನೂ ಬಹಿರಂಗಪಡಿಸುವುದಾಗಿ ಪ್ರಕಟಿಸಿದ್ದಾರೆ.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಕಳೆದ ಸೆಪ್ಟೆಂಬರ್ನಲ್ಲಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಕ್ಟೋಬರ್ ತಿಂಗಳಲ್ಲಿ ರಾಜ್ಯಪಾಲರಿಗೆ ಪ್ರಸ್ತಾವವೊಂದನ್ನು ಕಳುಹಿಸಿದ್ದ ರಾಜ್ಯ ಸರ್ಕಾರ, ಬನ್ನೂರಮಠ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಕೋರಿತ್ತು. ಆದರೆ, ಬನ್ನೂರಮಠ ಅವರು ಕಳಂಕಿತರು ಎಂದು ರಾಜ್ಯಪಾಲರು, ಅದನ್ನು ತಡೆ ಹಿಡಿದಿದ್ದರು.