ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಧಿಕಾ ಕುಮಾರಸ್ವಾಮಿ ಯಾರು ಸ್ವಾಮಿ?: ರೈತಸಂಘ
ಕುಮಾರಸ್ವಾಮಿಯವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ರಾಧಿಕಾ ಕುಮಾರಸ್ವಾಮಿ ಯಾರು ಎನ್ನುವುದನ್ನು ಸ್ವತಃ ಕುಮಾರಣ್ಣನೇ ಬಹಿರಂಗಪಡಿಸಬೇಕು ಎಂದು ರೈತಸಂಘದ ಮುಖಂಡ ಕೆಎಸ್ ನಂಜುಂಡೇಗೌಡ ಆಗ್ರಹಿಸಿದ್ದಾರೆ.
ಅಲ್ಲಿಗೆ, ರಾಧಿಕಾ ಕುಮಾರಸ್ವಾಮಿ ಯಾರು ಎಂಬುದನ್ನು ಹೈಕೋರ್ಟ್ ಸೇರಿದಂತೆ ರಾಜ್ಯದಲ್ಲಿ ಎಲ್ಲರೂ ಕೇಳಿದ್ದಾಯ್ತು. ರೈತಸಂಘ ಮಾತ್ರ ಬಾಕಿ ಉಳಿದಿತ್ತು ಅನಿಸುತ್ತದೆ.
'ನನಗೆ ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು. ನಾನು ಒಂದು ಪಿಕ್ಚರ್ ನೋಡಿದಾಗ ಆರಂಭದಲ್ಲಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ಇಬ್ಬರ ಚಿತ್ರಗಳು ಬರುವುದನ್ನು ನೋಡಿದ್ದೇನೆ. ಆದರೆ, ರಾಧಿಕಾ ಕುಮಾರಸ್ವಾಮಿ ಯಾರು ಎನ್ನುವ ಬಗ್ಗೆ ನನಗೆ ಈಗಲೂ ಅನುಮಾನವಿದೆ. ಅವರು ಯಾರು ಎಂಬುದನ್ನು ಕುಮಾರಸ್ವಾಮಿಯವರೂ ಬಾಯ್ಬಿಟ್ಟು ಹೇಳುತ್ತಿಲ್ಲ. ರಾಧಿಕಾ ಯಾರು ಅಂತ ಕುಮಾರಸ್ವಾಮಿ ಹೇಳಲು ಹಿಂಜರಿಯುತ್ತಿರುವುದೇಕೆ?' ಎಂದು ನಂಜುಂಡೇಗೌಡ ಪ್ರಶ್ನಿಸಿದ್ದಾರೆ.
Comments
ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ನೇಮಕಾತಿ ಬೆಂಗಳೂರು ವಿವಾದ ರೈತ ಕಪ್ಪು ಹಣ ಸ್ವಿಸ್ ಬ್ಯಾಂಕ್ ಕರ್ನಾಟಕ ಆಸ್ತಿ hd kumaraswamy swiss bank black money karnataka farmer
English summary
Karnataka farmers association leader KS Puttannaiah has come down heavily on JDS state president HD Kumaraswamy for his comments on the association having Swiss Bank account. Puttannaiah has said Kumaraswamy is mentally retarded without political power these days. Also KS Nanjunde Gowda is curious enough to know who Radhika Kumaraswamy is!?
Story first published: Tuesday, February 7, 2012, 9:56 [IST]